ಅಮೃತ ಮಹೋತ್ಸವ ಉದ್ಯಾನ: ಪ್ರಧಾನ ಮಂತ್ರಿ ಜನವಿಕಾಸ್ ಕಾರ್ಯಕ್ರಮ ಹಾಗೂ ವಕ್ಫ್ ತರಕ್ಕಿಯಾತ್ ಯೋಜನೆ ಸಹಯೋಗದಲ್ಲಿ ಖಾಲಿ ಇರುವ ವಕ್ಘ್ ಪ್ರದೇಶಗಳಲ್ಲಿ 75 ಅಮೃತ ಮಹೋತ್ಸವ ಉದ್ಯಾನಗಳನ್ನು ರೂಪಿಸಲಾಗುವುದು. ‘ಅಮೃತ ಮಹೋತ್ಸವ’ದ ಅಡಿಯಲ್ಲಿ ದೇಶದಾದ್ಯಂತ 2023ರವರೆಗೆ ‘ಮೇರಾ ವತನ್, ಮೇರಾ ಚಮನ್’ ಮುಷೈರಾ ಮತ್ತು ಕವಿ ಗೋಷ್ಠಿಗಳನ್ನು ಆಯೋಜಿಸಲಾಗುವುದು’ ಎಂದೂ ನಖ್ವಿ ತಿಳಿಸಿದರು.