‘ಮತಕಳವು ಆರೋಪಕ್ಕೆ ವ್ಯತಿರಿಕ್ತ.....’ ಇವಿಎಂ ಮೂಲಕ ಮುಕ್ತ ಮತ್ತು ಸ್ವತಂತ್ರವಾಗಿ ಚುನಾವಣೆ ನಡೆಸಲು ಸಾಧ್ಯ ಎಂಬುದನ್ನು ರಾಜ್ಯದ ಬಹುತೇಕ ಜನರು ಒಪ್ಪಿಕೊಂಡಿದ್ದಾರೆ ಎಂಬುದನ್ನು ಕರ್ನಾಟಕ ಸರ್ಕಾರವೇ ಪ್ರಕಟಿಸಿರುವ ವರದಿ ಹೇಳುತ್ತದೆ. ಚುನಾವಣಾ ಆಯೋಗವು ಮತಕಳವಿಗೆ ನೆರವು ನೀಡುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾಡುತ್ತಿರುವ ಆರೋಪವನ್ನು ಈ ಸಮೀಕ್ಷಾ ವರದಿ ನಿವಾಳಿಸಿ ಬಿಸಾಡುತ್ತದೆ.
-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ