ಮುಂಬೈ: 2022ರಲ್ಲಿ ನಡೆಯಲಿರುವ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆಗೆ ಆಮ್ ಆದ್ಮಿ ಪಕ್ಷ ಸಿದ್ಧತೆ ಆರಂಭಿಸಿದೆ.
ಇದಕ್ಕಾಗಿ ಕಾರ್ಯಪಡೆ ರಚಿಸಿರುವುದಾಗಿ ಕಳೆದ ವಾರವೇ ಆಮ್ ಆದ್ಮಿ ಪಕ್ಷ ಘೋಷಿಸಿತ್ತು.ಕಾರ್ಯಪಡೆ ಜತೆಗೆ ಮುಂಬೈಯ 6 ಲೋಕಸಭಾ ಸೀಟುಗಳು ಮತ್ತು 36 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಚುನಾವಣಾ ಪ್ರಚಾರ ನಡೆಸಲು ಪಕ್ಷ ತೀರ್ಮಾನಿಸಿದೆ.
ಪ್ರತಿಯೊಬ್ಬ ಮುಂಬೈ ನಿವಾಸಿಯತ್ತ ತಾವು ತಲುಪಬೇಕು ಎಂಬ ಉದ್ದೇಶದಿಂದ ಪಕ್ಷ ಕಾರ್ಯ ನಿರ್ವಹಿಸಲಿದೆ. ಮುಂಬೈ ನಿವಾಸಿಗಳು ಕೆಟ್ಟ ಆಡಳಿತ ಮತ್ತು ಸ್ಥಳೀಯ ಆಡಳಿತಾಧಿಕಾರ ಅಸಡ್ಡೆಯನ್ನು ವರ್ಷಗಳಿಂದ ಸಹಿಸಿಕೊಂಡು ಬಂದಿದ್ದಾರೆ.
ಪ್ರಾಮಾಣಿಕ ರಾಜಕಾರಣ ಮತ್ತು ಉತ್ತಮ ಆಡಳಿತಕ್ಕಾಗಿ ನೀವು ಆಮ್ ಆದ್ಮಿ ಪಕ್ಷ ಸೇರುವ ಮೂಲಕ ಜನಾಂದೋಲನವನ್ನು ಸುದೃಢವಾಗಿಸಿ ಎಂದು ನಾವು ಮನವಿ ಮಾಡುತ್ತಿದ್ದೇವೆ. 2022ರಲ್ಲಿ ಮುಂಬೈ ನಿವಾಸಿಗಳು ಉತ್ತಮ ಆಡಳಿತಕ್ಕಾಗಿ ಎಎಪಿ ಅಭ್ಯರ್ಥಿಗಳಿಗೆ ಮತ ಹಾಕಬೇಕು. ಎಎಪಿ ಪರ್ಯಾಯ ಮಾತ್ರವಲ್ಲ ಪರಿಹಾರವೂ ಹೌದು ಎಂದು ಎಎಪಿ ನಾಯಕಿ ಪ್ರೀತಿ ಶರ್ಮಾ ಮೆನನ್ ಹೇಳಿದ್ದಾರೆ.