<p><strong>ಅಹಮದಾಬಾದ್:</strong> ಪುಲ್ವಾಮ ಭಯೋತ್ಪಾದನಾ ದಾಳಿಯ 13ನೇ ದಿನಭಾರತೀಯ ವಾಯುಪಡೆ ಪಾಕಿಸ್ತಾನದ ಉಗ್ರ ಶಿಬಿರಗಳ ಮೇಲೆ ನಡೆಸಿದ ವಾಯುದಾಳಿಯಲ್ಲಿ 250ಕ್ಕಿಂತ ಹೆಚ್ಚು ಉಗ್ರರು ಹತ್ಯೆಯಾಗಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.</p>.<p>ಭಾನುವಾರ ಅಹಮದಾಬಾದ್ನಲ್ಲಿ ಲಕ್ಷ್ಯ JITO (ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್) ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಕಳೆದ 5 ವರ್ಷದಲ್ಲಿ ಎರಡು ಬಾರಿಉಗ್ರ ದಾಳಿ ನಡೆದಿತ್ತು. ಇದಕ್ಕೆ ಕೇಂದ್ರ ಸರ್ಕಾರ ತಕ್ಕ ಉತ್ತರವನ್ನು ನೀಡಿದೆ.</p>.<p>5 ವರ್ಷಗಳಲ್ಲಿ ಉರಿ ಮತ್ತು ಪುಲ್ವಾಮದಲ್ಲಿ ಎರಡು ಬಾರಿದೊಡ್ಡ ಮಟ್ಟದಲ್ಲಿಉಗ್ರ ದಾಳಿ ನಡೆದಿತ್ತು.ಉರಿ ದಾಳಿ ನಂತರ ನಮ್ಮ ಸೇನೆ ಪಾಕಿಸ್ತಾನದ ಒಳಗೆ ನುಗ್ಗಿ ನಿರ್ದಿಷ್ಟ ದಾಳಿ ಮಾಡುವ ಮೂಲಕ ಪ್ರತೀಕಾರ ನಡೆಸಿತ್ತು.</p>.<p>ಪುಲ್ವಾಮ ದಾಳಿ ನಂತರ ಈ ಬಾರಿ ನಿರ್ದಿಷ್ಟ ದಾಳಿ ನಡೆಯಲ್ಲ ಎಂದು ಎಲ್ಲರೂಊಹಿಸಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಾಯುದಾಳಿ ನಡೆಸಿ 250ಕ್ಕಿಂತಲೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಿತು. ಇದರಲ್ಲಿ ನಮ್ಮ ಯೋಧರು ಸುರಕ್ಷಿತವಾಗಿದ್ದರು ಎಂದಿದ್ದಾರೆ ಶಾ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಹಮದಾಬಾದ್:</strong> ಪುಲ್ವಾಮ ಭಯೋತ್ಪಾದನಾ ದಾಳಿಯ 13ನೇ ದಿನಭಾರತೀಯ ವಾಯುಪಡೆ ಪಾಕಿಸ್ತಾನದ ಉಗ್ರ ಶಿಬಿರಗಳ ಮೇಲೆ ನಡೆಸಿದ ವಾಯುದಾಳಿಯಲ್ಲಿ 250ಕ್ಕಿಂತ ಹೆಚ್ಚು ಉಗ್ರರು ಹತ್ಯೆಯಾಗಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.</p>.<p>ಭಾನುವಾರ ಅಹಮದಾಬಾದ್ನಲ್ಲಿ ಲಕ್ಷ್ಯ JITO (ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್) ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಕಳೆದ 5 ವರ್ಷದಲ್ಲಿ ಎರಡು ಬಾರಿಉಗ್ರ ದಾಳಿ ನಡೆದಿತ್ತು. ಇದಕ್ಕೆ ಕೇಂದ್ರ ಸರ್ಕಾರ ತಕ್ಕ ಉತ್ತರವನ್ನು ನೀಡಿದೆ.</p>.<p>5 ವರ್ಷಗಳಲ್ಲಿ ಉರಿ ಮತ್ತು ಪುಲ್ವಾಮದಲ್ಲಿ ಎರಡು ಬಾರಿದೊಡ್ಡ ಮಟ್ಟದಲ್ಲಿಉಗ್ರ ದಾಳಿ ನಡೆದಿತ್ತು.ಉರಿ ದಾಳಿ ನಂತರ ನಮ್ಮ ಸೇನೆ ಪಾಕಿಸ್ತಾನದ ಒಳಗೆ ನುಗ್ಗಿ ನಿರ್ದಿಷ್ಟ ದಾಳಿ ಮಾಡುವ ಮೂಲಕ ಪ್ರತೀಕಾರ ನಡೆಸಿತ್ತು.</p>.<p>ಪುಲ್ವಾಮ ದಾಳಿ ನಂತರ ಈ ಬಾರಿ ನಿರ್ದಿಷ್ಟ ದಾಳಿ ನಡೆಯಲ್ಲ ಎಂದು ಎಲ್ಲರೂಊಹಿಸಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಾಯುದಾಳಿ ನಡೆಸಿ 250ಕ್ಕಿಂತಲೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಿತು. ಇದರಲ್ಲಿ ನಮ್ಮ ಯೋಧರು ಸುರಕ್ಷಿತವಾಗಿದ್ದರು ಎಂದಿದ್ದಾರೆ ಶಾ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>