‘ಕಳೆದ ಮೂರು ವರ್ಷಗಳಿಂದ ಯಾತ್ರೆ ನಡೆಯದಿರುವ ಕಾರಣ ಈ ಬಾರಿ ಅತಿ ಹೆಚ್ಚಿನ ಸಂಖ್ಯೆಯ ಯಾತಾರ್ಥಿಗಳು ಬರುವ ಸಾಧ್ಯತೆಯಿದ್ದು, ಶಿಬಿರದ ಪ್ರದೇಶ, ವಾಹನ ನಿಲುಗಡೆ ಪ್ರದೇಶ ವಿಸ್ತರಣೆ ಹಾಗೂ ಆರೋಗ್ಯ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಸೌಕರ್ಯ ವ್ಯವಸ್ಥೆಯನ್ನು ಶೇ 50ರಷ್ಟು ಹೆಚ್ಚಳ ಮಾಡುವಂತೆ ನಿರ್ದೇಶನ ನೀಡಲಾಗಿದೆ’ ಎಂದು ಸರ್ಕಾರದ ವಕ್ತಾರರು ತಿಳಿಸಿದರು.