ಅಗರ್ತಲ: ಕೋವಿಡ್ ಕೇರ್ ಕೇಂದ್ರದಿಂದಕನಿಷ್ಠ 25 ಮಂದಿ ಸೋಂಕಿತರು ಪರಾರಿಯಾದ ಘಟನೆ ತ್ರಿಪುರಾದ ಅಂಬಸ್ಸದಲ್ಲಿ ನಡೆದಿದೆ. ಪರಾರಿಯಾದವರಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದ್ದು ಏಳು ಮಂದಿಯನ್ನು ರೈಲು ನಿಲ್ದಾಣದಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂಬಸ್ಸದ ಪಂಚಾಯತ್ ರಾಜ್ ತರಬೇತಿ ಸಂಸ್ಥೆಯ ಕಟ್ಟಡದಲ್ಲಿರುವ ಕೇಂದ್ರದಿಂದ ಸೋಮವಾರ ರಾತ್ರಿ ಸೋಂಕಿತರು ಪರಾರಿಯಾಗಿದ್ದಾರೆ. ಇವರೆಲ್ಲ ಇತರ ರಾಜ್ಯಗಳಿಂದ ಬಂದಿರುವ ವಲಸೆ ಕಾರ್ಮಿಕರು ಎಂದು ಅಂಬಸ್ಸ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಹಿಮಾದ್ರಿ ಸರ್ಕಾರ್ ತಿಳಿಸಿದ್ದಾರೆ.