‘ಅವನಿ’ಯ ದೇಹದಲ್ಲಿ ಅರವಳಿಕೆಮದ್ದು ಹೊಂದಿದ್ದ ಈಟಿ ಚುಚ್ಚಲಾಗಿತ್ತು. ಆದರೆ, ಈ ಈಟಿಯನ್ನು ನಿರ್ದಿಷ್ಟ ರೈಫಲ್ ಮೂಲಕ ಹಾರಿಬಿಡಲಾಗಿಲ್ಲ. ಅಲ್ಲದೆ, ಈಟಿಯಿಂದ ಆಳವಾದ ಗಾಯವೂ ಹುಲಿಗೆ ಆಗಿಲ್ಲ. ಇದನ್ನು ಗಮನಸಿಸಿದರೆ, ಅರವಳಿಕೆ ಮದ್ದು ನೀಡಿ ಅದನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದಕ್ಕಿಂತ ಅವನಿಯನ್ನು ಕೊಲ್ಲುವುದೇ ಶೂಟರ್ ಉದ್ದೇಶವಾಗಿತ್ತು. ಹುಲಿಯನ್ನು ಕೊಂದು, ನಂತರ ಅದಕ್ಕೆ ಈಟಿ ಚುಚ್ಚಿರುವುದು ವರದಿಯಿಂದ ದೃಢವಾಗುತ್ತದೆ’ ಎಂದು ಅವರು ಹೇಳಿದ್ದಾರೆ.