ಹಿಂದಿನ ಅವಧಿಯಲ್ಲಿ ಜಂಟಿಯಾಗಿ ಆಡಳಿತ ನಡೆಸಿದ್ದ ಬಿಜೆಪಿ– ಶಿವಸೇನಾ ಪಕ್ಷಗಳು, 2019ರ ವಿಧಾನಸಭಾ ಚುನಾವಣೆ ನಂತರ, ಅಧಿಕಾರದ ಹೊಂದಾಣಿಕೆಯಲ್ಲಿ ಒಮ್ಮತ ಮೂಡದೇ ಮೈತ್ರಿ ಕಡಿದುಕೊಂಡವು. ನಂತರ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು, ಕಾಂಗ್ರೆಸ್, ಶಿವಸೇನಾ ಮತ್ತು ಎನ್ಸಿಪಿ ಮೈತ್ರಿಕೂಟದ ಮಹಾ ವಿಕಾಸ ಆಘಾಡಿ(ಎಂವಿಎ) ಒಕ್ಕೂಟ ಸರ್ಕಾರ ರಚನೆಗೆ ಮುಂದಾದರು. ಹಾಗಾಗಿ ಅವರನ್ನು ‘ಎಂವಿಎ ಮೈತ್ರಿಕೂಟ ಸರ್ಕಾರದ ವಾಸ್ತುಶಿಲ್ಪಿ‘ ಎಂದು ಪರಿಗಣಿಸಲಾಗಿತ್ತು.