ಲಾಲೂ ಅವರ ಹೇಳಿಕೆಯನ್ನು ಹಾಗೂ ಉಭಯ ನಾಯಕರೂ ಹಸ್ತಲಾಘವ ಮಾಡಿಕೊಂಡ ಘಟನೆಯನ್ನು ಉಲ್ಲೇಖಿಸಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಅವರನ್ನು ಭೇಟಿಯಾದಗೆಲ್ಲಾ ಹಸ್ತಲಾಘವ ಮಾಡುತ್ತೇನೆ ಅಷ್ಟೇ. ಯಾರು ಏನು ಹೇಳುತ್ತಾರೋ ಅವುಗಳ ಬಗ್ಗೆ ನಾನು ಚಿಂತಿಸುವುದಿಲ್ಲ. ಎಲ್ಲವೂ ಸರಿ ಹೋಗುತ್ತಿರಲಿಲ್ಲ. ಹೀಗಾಗಿ ನಾನು ಅವರನ್ನು (ಆರ್ಜೆಡಿ) ಬಿಟ್ಟೆ’ ಎಂದಿದ್ದಾರೆ.
ಭವಿಷ್ಯದಲ್ಲಿ ನಿತೀಶ್ ಕುಮಾರ್ ಅವರಿಗೆ ಅವಕಾಶ ಕೊಡುವಿರೇ ಎನ್ನುವ ಪ್ರಶ್ನೆಗೆ ಶುಕ್ರವಾರ ಉತ್ತರಿಸಿದ್ದ ಲಾಲೂ ಪ್ರಸಾದ್, ‘ಬಂದಾಗ ನೋಡಿಕೊಳ್ಳೋಣ. ಬಾಗಿಲುಗಳು ಯಾವಾಗಲೂ ತೆರೆದಿರುತ್ತದೆ’ ಎಂದು ಉತ್ತರಿಸಿದ್ದರು.