ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀರ್‌ಭೂಮ್ ಹತ್ಯೆ: ಸಂಘಟಿತ, ಯೋಜಿತ ನರಮೇಧ–ಸಿಬಿಐ ವರದಿ

Last Updated 8 ಏಪ್ರಿಲ್ 2022, 16:28 IST
ಅಕ್ಷರ ಗಾತ್ರ

ಕೋಲ್ಕತ್ತ(ಪಿಟಿಐ): ಪಶ್ಚಿಮ ಬಂಗಾಳದ ಬೀರಭೂಮ್‌ನಲ್ಲಿ ನಡೆದ ಹತ್ಯೆ ಸಂಘಟಿತ ಮತ್ತು ಯೋಜಿತವಾಗಿ ನಡೆದ ನರಮೇಧವಾಗಿದೆ ಎಂದು ಸಿಬಿಐ ತನ್ನ ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಿದೆ. ಸ್ಥಳೀಯ ತೃಣಮೂಲ ಕಾಂಗ್ರೆಸ್ ಮುಖಂಡ ಭಾದು ಶೇಖ್ ಅವರ ಹತ್ಯೆಯ ಪ್ರತೀಕಾರವಾಗಿ ನಡೆದ ದುಷ್ಕೃತ್ಯ ಇದಾಗಿದೆ ಎಂದೂ ಅದು ಹೇಳಿದೆ.

ಮನೆಯೊಂದರಲ್ಲಿ ಸುಟ್ಟು ಹಾಕಲಾಗಿದ್ದ 7 ಮಂದಿ ಸಂತ್ರಸ್ತರ ದೇಹಗಳನ್ನು ವಶಕ್ಕೆ ಪಡೆದು ಪರಿಶೀಲಿಸಲಾಗಿದ್ದು, ಅವರನ್ನು ಸಜೀವ ದಹನ ಮಾಡುವುದಕ್ಕೂ ಮುನ್ನ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದೂ 20 ಪುಟಗಳ ವರದಿಯಲ್ಲಿ ಸಿಬಿಐ ತಿಳಿಸಿದೆ.

ಮಾರ್ಚ್ 21ರಂದು ಭಾದು ಶೇಖ್ ಅವರ ಹತ್ಯೆಯ ಬಳಿಕ ರೊಚ್ಚಿಗೆದ್ದ ಅವರ ಬೆಂಬಲಿಗರ ಗುಂಪು, ತಮ್ಮ ಎದುರಾಳಿ ಗುಂಪಿನವರ ಮನೆಗಳಿಗೆ ತೆರಳಿ, ಅವರ ಮನೆಗಳಿಗೆ ಬೆಂಕಿ ಹಚ್ಚಿ, ಕುಟುಂಬ ಸದಸ್ಯರನ್ನು ಹತ್ಯೆ ಮಾಡುವ ಕೆಲಸವನ್ನು ಯೋಜಿತ ಮತ್ತು ಸಂಘಟಿತವಾಗಿ ಮಾಡಿದ್ದರು. ಇದರಿಂದಾಗಿ ಎದುರಾಳಿ ಗುಂಪಿನ 9 ಮಂದಿ ಬಲಿಯಾಗಿದ್ದರು ಎಂದು ಹೇಳಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT