ನವದೆಹಲಿ: ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ದೂರಿದ್ದಾರೆ.
‘ಬಿಜೆಪಿ ನಾಯಕರ ತಂಡವು ಸರ್ಕಾರವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್ ಶಾಸಕರಿಗೆ ಆಮಿಷವೊಡ್ಡಲಾಗುತ್ತಿದೆ’ ಎಂದು ಕಾಂಗ್ರೆಸ್ ಶಾಸಕ ಗಣಿಗ ಪಿ. ರವಿಕುಮಾರ್ ಮಾಡಿರುವ ಆರೋಪ ಕುರಿತ ಮಾಧ್ಯಮ ವರದಿಯನ್ನು ವೇಣುಗೋಪಾಲ್ ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
‘ನಾಯಕ ಮತ್ತು ಕಾರ್ಯಸೂಚಿ ಹೊಂದಿರದ ಆ ಪಕ್ಷವು, ಜನರ ಆದೇಶಕ್ಕೆ ವಿರುದ್ಧವಾಗಿ ವರ್ತಿಸುವ ಹಳೆ ಛಾಳಿ ಮುಂದುವರಿಸಿದೆ. ಆದರೆ, ಅದು ಫಲಿಸುವುದಿಲ್ಲ’ ಎಂದು ಅವರು ಹೇಳಿದ್ದಾರೆ.