ಜನಾಂಗೀಯ ಸಂಘರ್ಷ ಕುರಿತು ನಡೆಯುತ್ತಿರುವ ತನಿಖೆ, ಪರಿಹಾರ ಕಾರ್ಯಗಳು ಹಾಗೂ ಪುನರ್ವಸತಿಯ ಮೇಲ್ವಿಚಾರಣೆಗಾಗಿ ಹೈಕೋರ್ಟ್ನ ಮೂವರು ನಿವೃತ್ತ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯನ್ನು ಸುಪ್ರೀಂ ಕೋರ್ಟ್ ರಚಿಸಿದೆ. ನ್ಯಾಯಮೂರ್ತಿಗಳಾದ ಗೀತಾ ಮಿತ್ತಲ್, ಶಾಲಿನಿ ಜೋಷಿ ಹಾಗೂ ಆಶಾ ಮೆನನ್ ಈ ಸಮಿತಿಯಲ್ಲಿದ್ದಾರೆ.