<p><strong>ಗೋಧ್ರಾ(ಗುಜರಾತ್)</strong>: ‘ನೀಟ್–ಯುಜಿ’ಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ನಡೆಸುತ್ತಿರುವ ತನಿಖೆಯನ್ನು ಚುರುಕುಗೊಳಿಸಿರುವ ಸಿಬಿಐ, ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ತಮಗೆ ನೆರವು ನೀಡುವುದಕ್ಕಾಗಿ ಆರೋಪಿಯೊಬ್ಬನಿಗೆ ಹಣ ನೀಡಿದ ಆರೋಪ ಎದುರಿಸುತ್ತಿರುವ ಮೂವರು ಅಭ್ಯರ್ಥಿಗಳ ಹೇಳಿಕೆಗಳನ್ನು ಗುರುವಾರ ದಾಖಲಿಸಿಕೊಂಡಿದೆ.</p>.<p>ಈ ಮೂವರು ಅಭ್ಯರ್ಥಿಗಳು ಮತ್ತು ಅವರ ಪಾಲಕರನ್ನಲ್ಲದೇ, ಗೋಧ್ರಾದಲ್ಲಿರುವ ಜಯ ಜಲರಾಮ್ ಸ್ಕೂಲ್ ಮಾಲೀಕ ದೀಕ್ಷಿತ್ ಪಟೇಲ್ ಎಂಬುವವರನ್ನು ಸಹ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೀಕ್ಷಿತ್ ಒಡೆತನದ ಈ ಶಾಲೆ ನೀಟ್–ಯುಜಿ ಪರೀಕ್ಷಾ ಕೇಂದ್ರವೂ ಆಗಿತ್ತು.</p>.<p>ಪರೀಕ್ಷಾ ಅಕ್ರಮಗಳ ಕುರಿತು ನಡೆಸುತ್ತಿರುವ ತನಿಖೆ ಭಾಗವಾಗಿ, ಸಿಬಿಐ ಅಧಿಕಾರಿಗಳು ಕಳೆದ ನಾಲ್ಕು ದಿನಗಳಿಂದ ಗುಜರಾತ್ನಲ್ಲಿ ಠಿಕಾಣಿ ಹೂಡಿದ್ದಾರೆ. ಗುಜರಾತ್ನ ಖೇಡಾ ಮತ್ತು ಪಂಚಮಹಲ್ ಜಿಲ್ಲೆಗಳಲ್ಲಿರುವ ಎರಡು ಖಾಸಗಿ ಶಾಲೆಗಳಿಗೆ ಸಿಬಿಐ ಅಧಿಕಾರಿಗಳು ಬುಧವಾರ ಭೇಟಿ ನೀಡಿದ್ದರು.</p>.<p>ಖೇಡಾ ಜಿಲ್ಲೆಯಲ್ಲಿರುವ ಜಲರಾಮ್ ಇಂಟರ್ನ್ಯಾಷನಲ್ ಸ್ಕೂಲ್ ಹಾಗೂ ಪಂಚಮಹಲ್ ಜಿಲ್ಲೆಯ ಗೋಧ್ರಾದಲ್ಲಿರುವ ಜಯ ಜಲರಾಮ್ ಸ್ಕೂಲ್ಗಳು ದೀಕ್ಷಿತ್ ಪಟೇಲ್ ಒಡೆತನದಲ್ಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಧ್ರಾ(ಗುಜರಾತ್)</strong>: ‘ನೀಟ್–ಯುಜಿ’ಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ನಡೆಸುತ್ತಿರುವ ತನಿಖೆಯನ್ನು ಚುರುಕುಗೊಳಿಸಿರುವ ಸಿಬಿಐ, ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ತಮಗೆ ನೆರವು ನೀಡುವುದಕ್ಕಾಗಿ ಆರೋಪಿಯೊಬ್ಬನಿಗೆ ಹಣ ನೀಡಿದ ಆರೋಪ ಎದುರಿಸುತ್ತಿರುವ ಮೂವರು ಅಭ್ಯರ್ಥಿಗಳ ಹೇಳಿಕೆಗಳನ್ನು ಗುರುವಾರ ದಾಖಲಿಸಿಕೊಂಡಿದೆ.</p>.<p>ಈ ಮೂವರು ಅಭ್ಯರ್ಥಿಗಳು ಮತ್ತು ಅವರ ಪಾಲಕರನ್ನಲ್ಲದೇ, ಗೋಧ್ರಾದಲ್ಲಿರುವ ಜಯ ಜಲರಾಮ್ ಸ್ಕೂಲ್ ಮಾಲೀಕ ದೀಕ್ಷಿತ್ ಪಟೇಲ್ ಎಂಬುವವರನ್ನು ಸಹ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೀಕ್ಷಿತ್ ಒಡೆತನದ ಈ ಶಾಲೆ ನೀಟ್–ಯುಜಿ ಪರೀಕ್ಷಾ ಕೇಂದ್ರವೂ ಆಗಿತ್ತು.</p>.<p>ಪರೀಕ್ಷಾ ಅಕ್ರಮಗಳ ಕುರಿತು ನಡೆಸುತ್ತಿರುವ ತನಿಖೆ ಭಾಗವಾಗಿ, ಸಿಬಿಐ ಅಧಿಕಾರಿಗಳು ಕಳೆದ ನಾಲ್ಕು ದಿನಗಳಿಂದ ಗುಜರಾತ್ನಲ್ಲಿ ಠಿಕಾಣಿ ಹೂಡಿದ್ದಾರೆ. ಗುಜರಾತ್ನ ಖೇಡಾ ಮತ್ತು ಪಂಚಮಹಲ್ ಜಿಲ್ಲೆಗಳಲ್ಲಿರುವ ಎರಡು ಖಾಸಗಿ ಶಾಲೆಗಳಿಗೆ ಸಿಬಿಐ ಅಧಿಕಾರಿಗಳು ಬುಧವಾರ ಭೇಟಿ ನೀಡಿದ್ದರು.</p>.<p>ಖೇಡಾ ಜಿಲ್ಲೆಯಲ್ಲಿರುವ ಜಲರಾಮ್ ಇಂಟರ್ನ್ಯಾಷನಲ್ ಸ್ಕೂಲ್ ಹಾಗೂ ಪಂಚಮಹಲ್ ಜಿಲ್ಲೆಯ ಗೋಧ್ರಾದಲ್ಲಿರುವ ಜಯ ಜಲರಾಮ್ ಸ್ಕೂಲ್ಗಳು ದೀಕ್ಷಿತ್ ಪಟೇಲ್ ಒಡೆತನದಲ್ಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>