<p><strong>ಚೆನ್ನೈ:</strong> ಗ್ರಾಮಸ್ಥರ ಪ್ರತಿಭಟನೆ ನಡುವೆಯೂ ಚೆನ್ನೈ ಸಮೀಪ ಹೊಸ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ನಿರ್ಮಿಸಲು ತಮಿಳುನಾಡು ಸರ್ಕಾರ ಭೂಸ್ವಾದೀನ ಪ್ರಕ್ರಿಯೆ ಚುರುಕುಗೊಳಿಸಿದೆ. </p>.<p>5,746 ಎಕರೆ ಪ್ರದೇಶ ಯೋಜನೆಗೆ ಅಗತ್ಯವಿದ್ದು, ಕಾಂಚಿಪುರಂ ಜಿಲ್ಲೆಯ ಪರಂದೂರಿನಲ್ಲಿ ಈಗಾಗಲೇ ಶೇ 30ರಷ್ಟು (ಸುಮಾರು 3,800 ಎಕರೆ) ಭೂಮಿಯನ್ನು ಖಾಸಗಿಯವರಿಂದ ಸರ್ಕಾರ ಖರೀದಿಸಿದೆ. 2026ರ ವಿಧಾನಸಭೆ ಚುನಾವಣೆಗೂ ಮುನ್ನ ಉಳಿದ ಶೇ 40ರಷ್ಟು ಭೂಮಿ ಖರೀದಿಸುವ ವಿಶ್ವಾಸದಲ್ಲಿ ಸರ್ಕಾರ ಇದೆ.</p>.<p>ಆರಂಭದಲ್ಲಿ ಇಲ್ಲಿನ ಜನರು ಯೋಜನೆಗೆ ಭೂಮಿ ನೀಡಲು ನಿರಾಕರಿಸಿದ್ದರು. ಮಾರ್ಗಸೂಚಿ ದರಕ್ಕಿಂತ ಮೂರರಿಂದ ಏಳುಪಟ್ಟು ಹೆಚ್ಚು ದರ ನಿಗದಿ, ಪುನರ್ ವಸತಿ ಕಲ್ಪಿಸುವ ಪರಿಹಾರ ಪ್ಯಾಕೇಜ್ ರೈತರ ಪ್ರತಿರೋಧ ತಗ್ಗಿಸುವಲ್ಲಿ ಕೆಲಸ ಮಾಡಿದೆ ಎಂದು ಮೂಲಗಳು ಹೇಳಿವೆ.</p>.<p>ಆದರೆ, ಏಕನಾಪುರಂ ಗ್ರಾಮಸ್ಥರು 2022ರಿಂದ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮದ 500 ಎಕರೆ ಭೂಮಿ ಸ್ವಾಧೀನ ಆಗಲಿದ್ದು, ಯೋಜನೆಗಾಗಿ 1000 ಮನೆಗಳ ಪೈಕಿ ಶೇ 60ರಷ್ಟು ಮನೆಗಳನ್ನು ನೆಲಸಮ ಮಾಡಬೇಕಿದೆ. ಗ್ರಾಮಸ್ಥರ ಒಪ್ಪಿಗೆ ಇಲ್ಲದೇ ವಿಮಾನ ನಿಲ್ದಾಣ ಸಾಧ್ಯವಿಲ್ಲ. ನಿಲ್ದಾಣದ ರನ್ವೇಗಾಗಿ ಈ ಭೂಮಿ ಅಗತ್ಯವಿದೆ.</p>.<p>ವಿಧಾನಸಭೆ ಚುನಾವಣೆ ಮುಗಿಯುವವರೆಗೂ ಹೋರಾಟವನ್ನು ಬಲಪ್ರಯೋಗದಿಂದ ನಿಯಂತ್ರಿಸದೇ ಇರಲು ಸರ್ಕಾರ ತೀರ್ಮಾನಿಸಿದೆ. ಹೀಗಾಗಿ ಯೋಜನೆ ಒಂದು ವರ್ಷ ವಿಳಂಬವಾಗುವ ಸಾಧ್ಯತೆ ಇದೆ ಎಂದು ಮತ್ತೊಂದು ಮೂಲ ಹೇಳುತ್ತಿದೆ.</p>.<p>ಚೆನ್ನೈಗೆ ಎಲೆಕ್ಟ್ರಾನಿಕ್ಸ್, ಆಟೊಮೊಬೈಲ್ಸ್ ಸೇರಿ ವಿವಿಧ ಕ್ಷೇತ್ರದ ಹೂಡಿಕೆ ಆಕರ್ಷಿಸಲು ಪರಂದೂರು ವಿಮಾನ ನಿಲ್ದಾಣ ಅತ್ಯಗತ್ಯ. ಮೀನಂಬಾಕಂನಲ್ಲಿರುವ ಹಾಲಿ ವಿಮಾನ ನಿಲ್ದಾಣಕ್ಕೆ ಬೆಂಗಳೂರು, ಹೈದರಾಬಾದ್ ವಿಮಾನ ನಿಲ್ದಾಣಗಳಷ್ಟು ಮೂಲಸೌಕರ್ಯ ಇಲ್ಲ. ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆ ನಿರ್ವಹಿಸುವುದು ಕಷ್ಟವಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆ.</p>.<p>ಮೂಲಗಳ ಪ್ರಕಾರ ಕೇಂದ್ರ ಸರ್ಕಾರ ಈಗಾಗಲೇ ಆರಂಭಿಕ ಅನುಮೋದನೆ ನೀಡಿದ್ದು, ರಾಜ್ಯ ಸರ್ಕಾರ ಗುತ್ತಿಗೆ ಟೆಂಡರ್ ಕರೆಯಲು ಸಜ್ಜಾಗುತ್ತಿದೆ. 2006ರಲ್ಲೇ ರೂಪಿಸಲಾಗಿದ್ದ ಈ ಯೋಜನೆ ಪಿಎಂಕೆ ಪಕ್ಷದ ವಿರೋಧದಿಂದಾಗಿ ಮೂರ್ತರೂಪಕ್ಕೆ ಬರಲು ಸಾಧ್ಯವಾಗಿರಲಿಲ್ಲ. </p>
<p><strong>ಚೆನ್ನೈ:</strong> ಗ್ರಾಮಸ್ಥರ ಪ್ರತಿಭಟನೆ ನಡುವೆಯೂ ಚೆನ್ನೈ ಸಮೀಪ ಹೊಸ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ನಿರ್ಮಿಸಲು ತಮಿಳುನಾಡು ಸರ್ಕಾರ ಭೂಸ್ವಾದೀನ ಪ್ರಕ್ರಿಯೆ ಚುರುಕುಗೊಳಿಸಿದೆ. </p>.<p>5,746 ಎಕರೆ ಪ್ರದೇಶ ಯೋಜನೆಗೆ ಅಗತ್ಯವಿದ್ದು, ಕಾಂಚಿಪುರಂ ಜಿಲ್ಲೆಯ ಪರಂದೂರಿನಲ್ಲಿ ಈಗಾಗಲೇ ಶೇ 30ರಷ್ಟು (ಸುಮಾರು 3,800 ಎಕರೆ) ಭೂಮಿಯನ್ನು ಖಾಸಗಿಯವರಿಂದ ಸರ್ಕಾರ ಖರೀದಿಸಿದೆ. 2026ರ ವಿಧಾನಸಭೆ ಚುನಾವಣೆಗೂ ಮುನ್ನ ಉಳಿದ ಶೇ 40ರಷ್ಟು ಭೂಮಿ ಖರೀದಿಸುವ ವಿಶ್ವಾಸದಲ್ಲಿ ಸರ್ಕಾರ ಇದೆ.</p>.<p>ಆರಂಭದಲ್ಲಿ ಇಲ್ಲಿನ ಜನರು ಯೋಜನೆಗೆ ಭೂಮಿ ನೀಡಲು ನಿರಾಕರಿಸಿದ್ದರು. ಮಾರ್ಗಸೂಚಿ ದರಕ್ಕಿಂತ ಮೂರರಿಂದ ಏಳುಪಟ್ಟು ಹೆಚ್ಚು ದರ ನಿಗದಿ, ಪುನರ್ ವಸತಿ ಕಲ್ಪಿಸುವ ಪರಿಹಾರ ಪ್ಯಾಕೇಜ್ ರೈತರ ಪ್ರತಿರೋಧ ತಗ್ಗಿಸುವಲ್ಲಿ ಕೆಲಸ ಮಾಡಿದೆ ಎಂದು ಮೂಲಗಳು ಹೇಳಿವೆ.</p>.<p>ಆದರೆ, ಏಕನಾಪುರಂ ಗ್ರಾಮಸ್ಥರು 2022ರಿಂದ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮದ 500 ಎಕರೆ ಭೂಮಿ ಸ್ವಾಧೀನ ಆಗಲಿದ್ದು, ಯೋಜನೆಗಾಗಿ 1000 ಮನೆಗಳ ಪೈಕಿ ಶೇ 60ರಷ್ಟು ಮನೆಗಳನ್ನು ನೆಲಸಮ ಮಾಡಬೇಕಿದೆ. ಗ್ರಾಮಸ್ಥರ ಒಪ್ಪಿಗೆ ಇಲ್ಲದೇ ವಿಮಾನ ನಿಲ್ದಾಣ ಸಾಧ್ಯವಿಲ್ಲ. ನಿಲ್ದಾಣದ ರನ್ವೇಗಾಗಿ ಈ ಭೂಮಿ ಅಗತ್ಯವಿದೆ.</p>.<p>ವಿಧಾನಸಭೆ ಚುನಾವಣೆ ಮುಗಿಯುವವರೆಗೂ ಹೋರಾಟವನ್ನು ಬಲಪ್ರಯೋಗದಿಂದ ನಿಯಂತ್ರಿಸದೇ ಇರಲು ಸರ್ಕಾರ ತೀರ್ಮಾನಿಸಿದೆ. ಹೀಗಾಗಿ ಯೋಜನೆ ಒಂದು ವರ್ಷ ವಿಳಂಬವಾಗುವ ಸಾಧ್ಯತೆ ಇದೆ ಎಂದು ಮತ್ತೊಂದು ಮೂಲ ಹೇಳುತ್ತಿದೆ.</p>.<p>ಚೆನ್ನೈಗೆ ಎಲೆಕ್ಟ್ರಾನಿಕ್ಸ್, ಆಟೊಮೊಬೈಲ್ಸ್ ಸೇರಿ ವಿವಿಧ ಕ್ಷೇತ್ರದ ಹೂಡಿಕೆ ಆಕರ್ಷಿಸಲು ಪರಂದೂರು ವಿಮಾನ ನಿಲ್ದಾಣ ಅತ್ಯಗತ್ಯ. ಮೀನಂಬಾಕಂನಲ್ಲಿರುವ ಹಾಲಿ ವಿಮಾನ ನಿಲ್ದಾಣಕ್ಕೆ ಬೆಂಗಳೂರು, ಹೈದರಾಬಾದ್ ವಿಮಾನ ನಿಲ್ದಾಣಗಳಷ್ಟು ಮೂಲಸೌಕರ್ಯ ಇಲ್ಲ. ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆ ನಿರ್ವಹಿಸುವುದು ಕಷ್ಟವಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆ.</p>.<p>ಮೂಲಗಳ ಪ್ರಕಾರ ಕೇಂದ್ರ ಸರ್ಕಾರ ಈಗಾಗಲೇ ಆರಂಭಿಕ ಅನುಮೋದನೆ ನೀಡಿದ್ದು, ರಾಜ್ಯ ಸರ್ಕಾರ ಗುತ್ತಿಗೆ ಟೆಂಡರ್ ಕರೆಯಲು ಸಜ್ಜಾಗುತ್ತಿದೆ. 2006ರಲ್ಲೇ ರೂಪಿಸಲಾಗಿದ್ದ ಈ ಯೋಜನೆ ಪಿಎಂಕೆ ಪಕ್ಷದ ವಿರೋಧದಿಂದಾಗಿ ಮೂರ್ತರೂಪಕ್ಕೆ ಬರಲು ಸಾಧ್ಯವಾಗಿರಲಿಲ್ಲ. </p>