ಆರ್ಥಿಕತೆ ಪ್ರಶ್ನಿಸಿದ ಚಿದಂಬರಂ: ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಚಿದಂಬರಂ, ಆರ್ಥಿಕ ಕುಸಿತದಿಂದ ಪಾರಾಗಲು ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.ಚಿದಂಬರಂ ಪರವಾಗಿ ಅವರ ಕುಟುಂಬದವರು ಟ್ವೀಟ್ ಮಾಡಿದ್ದಾರೆ. ‘ಅವನತಿಯತ್ತ ಸಾಗು ತ್ತಿರುವ ಇಂಥ ಅರ್ಥ ವ್ಯವಸ್ಥೆ ಸರಿದಾರಿಗೆ ತರಲು ಸರ್ಕಾರದ ಬಳಿ ಯೋಜನೆ ಎಲ್ಲಿದೆ?’ ಎಂದು ಪ್ರಶ್ನಿಸಲಾಗಿದೆ.