ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕಂಗನಾ ನೀಡಿದ್ದ ಹೇಳಿಕೆಯು ಸಿಐಎಸ್ಎಫ್ ಕಾನ್ಸ್ಟೆಬಲ್ ಮನಸ್ಸಿನ ಮೇಲೆ ಪ್ರಭಾವ ಬೀರಿರಬಹುದು. ಇದರಿಂದಾಗಿ ಈ ಘಟನೆ ನಡೆದಿರಬಹುದು. ಆದರೆ ಇಂತಹ ಘಟನೆ ನಡೆಯಬಾರದಿತ್ತು‘ ಎಂದು ಪುನರುಚ್ಚರಿಸಿದರು.
‘ಪಂಜಾಬ್ ಅನ್ನು ಭಯೋತ್ಪಾದನಾ ರಾಜ್ಯ ಹಾಗೂ ಇಲ್ಲಿನ ಪ್ರಜೆಗಳನ್ನು ಪ್ರತ್ಯೇಕವಾದಿಗಳೆಂದು ಕರೆಯುವುದು ತಪ್ಪು. ಸ್ವಾತಂತ್ರ್ಯ ಹೋರಾಟದಲ್ಲಿ ಪಂಜಾಬ್ ಜನರು ಪಾಲ್ಗೊಂಡ ಬಗೆಯನ್ನು ಮರೆಯುವಂತಿಲ್ಲ‘ ಎಂದು ಕಂಗನಾ ನೀಡಿದ್ದ ಭಯೋತ್ಪಾದನೆ ಕುರಿತ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.