<p><strong>ಬಿಜನೋರ್</strong>: ಧನ್ಬಾದ್ಗೆ ಹೋಗುತ್ತಿದ್ದ ಗಂಗಾ ಸಟ್ಲೆಜ್ ಎಕ್ಸ್ಪ್ರೆಸ್ ರೈಲಿನ ಕನಿಷ್ಠ 10 ಬೋಗಿಗಳ ಸಂಪರ್ಕ ಭಾನುವಾರ ಕಡಿತಗೊಂಡಿದ್ದು, ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಧನ್ಬಾದ್ಗೆ ಹೋಗುತ್ತಿದ್ದ ರೈಲಿನ ಕೆಲವು ಬೋಗಿಗಳು ಮುಂಜಾನೆ 4 ಗಂಟೆ ಸುಮಾರಿಗೆ ಎಂಜಿನ್ನಿಂದ ಬೇರ್ಪಟ್ಟವು ಮತ್ತು ಇತರ ಕೆಲ ಬೋಗಿಗಳಲ್ಲಿ ತಾಂತ್ರಿಕ ಸಮಸ್ಯೆ ಉಂಟಾಯಿತು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರಂ ಸಿಂಗ್ ಮಾರ್ಚಲ್ ತಿಳಿಸಿದ್ದಾರೆ.</p>.<p>ಎರಡು ಸ್ಲೀಪರ್ ಕೋಚ್ಗಳ ನಡುವಿನ ಜೋಡಣೆ ಬೇರ್ಪಟ್ಟಾಗ ಈ ಘಟನೆ ಸಂಭವಿಸಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಫಿರೋಜ್ಪುರ-ಧನ್ಬಾದ್ ರೈಲಿನ ಜೋಡಣೆಯನ್ನು ಸರಿಪಡಿಸಿದ ನಂತರ ರೈಲು ಹೊರಟಿತು ಎಂದು ಅವರು ಹೇಳಿದರು.</p>.<p>ರೈಲಿನಲ್ಲಿ ಉತ್ತರ ಪ್ರದೇಶ ಪೊಲೀಸ್ ನೇಮಕಾತಿ ಪರೀಕ್ಷೆಗೆ ತೆರಳುತ್ತಿದ್ದ 200 ಜನ ಅಭ್ಯರ್ಥಿಗಳಿದ್ದರೂ, ರೈಲ್ವೆ ಆಡಳಿತ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಅವರಿಗೆ ಮೂರು ಬಸ್ಗಳ ಮೂಲಕ ಪರೀಕ್ಷಾ ಕೇಂದ್ರಕ್ಕೆ ತೆರಳಲು ವ್ಯವಸ್ಥೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಿಜನೋರ್</strong>: ಧನ್ಬಾದ್ಗೆ ಹೋಗುತ್ತಿದ್ದ ಗಂಗಾ ಸಟ್ಲೆಜ್ ಎಕ್ಸ್ಪ್ರೆಸ್ ರೈಲಿನ ಕನಿಷ್ಠ 10 ಬೋಗಿಗಳ ಸಂಪರ್ಕ ಭಾನುವಾರ ಕಡಿತಗೊಂಡಿದ್ದು, ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಧನ್ಬಾದ್ಗೆ ಹೋಗುತ್ತಿದ್ದ ರೈಲಿನ ಕೆಲವು ಬೋಗಿಗಳು ಮುಂಜಾನೆ 4 ಗಂಟೆ ಸುಮಾರಿಗೆ ಎಂಜಿನ್ನಿಂದ ಬೇರ್ಪಟ್ಟವು ಮತ್ತು ಇತರ ಕೆಲ ಬೋಗಿಗಳಲ್ಲಿ ತಾಂತ್ರಿಕ ಸಮಸ್ಯೆ ಉಂಟಾಯಿತು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರಂ ಸಿಂಗ್ ಮಾರ್ಚಲ್ ತಿಳಿಸಿದ್ದಾರೆ.</p>.<p>ಎರಡು ಸ್ಲೀಪರ್ ಕೋಚ್ಗಳ ನಡುವಿನ ಜೋಡಣೆ ಬೇರ್ಪಟ್ಟಾಗ ಈ ಘಟನೆ ಸಂಭವಿಸಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಫಿರೋಜ್ಪುರ-ಧನ್ಬಾದ್ ರೈಲಿನ ಜೋಡಣೆಯನ್ನು ಸರಿಪಡಿಸಿದ ನಂತರ ರೈಲು ಹೊರಟಿತು ಎಂದು ಅವರು ಹೇಳಿದರು.</p>.<p>ರೈಲಿನಲ್ಲಿ ಉತ್ತರ ಪ್ರದೇಶ ಪೊಲೀಸ್ ನೇಮಕಾತಿ ಪರೀಕ್ಷೆಗೆ ತೆರಳುತ್ತಿದ್ದ 200 ಜನ ಅಭ್ಯರ್ಥಿಗಳಿದ್ದರೂ, ರೈಲ್ವೆ ಆಡಳಿತ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಅವರಿಗೆ ಮೂರು ಬಸ್ಗಳ ಮೂಲಕ ಪರೀಕ್ಷಾ ಕೇಂದ್ರಕ್ಕೆ ತೆರಳಲು ವ್ಯವಸ್ಥೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>