ನವದೆಹಲಿ: ಪ್ರಬಲ ಹಾಗೂ ವಿಶ್ವಾಸಾರ್ಹ ಅಭ್ಯರ್ಥಿ ಇಲ್ಲದೇ ಹೋದರೆ ಹೋರಾಟದಲ್ಲಿ ಪರಾಭವ ಖಚಿತ ಎನ್ನುವ ಪರಿಸ್ಥಿತಿಯಿದ್ದಾಗ ಪ್ರತಿಪಕ್ಷಗಳು ತಿರುಗಿ ನೋಡಿದ್ದು ಮಾರ್ಗರೇಟ್ ಆಳ್ವ ಅವರತ್ತ. ಅವರು ಪ್ರತಿಪಕ್ಷಗಳಿಗೆ ನಿರಾಸೆ ಮಾಡಲಿಲ್ಲ.ವರ್ಚಸ್ವಿ ವ್ಯಕ್ತಿತ್ವ, ಉತ್ತಮ ಆಡಳಿತಗಾರ್ತಿ ಎಂಬ ಶ್ರೇಯದ ಜೊತೆಗೆ ತಮ್ಮ ಸಿದ್ಧಾಂತ, ಬದ್ಧತೆ ಹಾಗೂ ನಿಲುವುಗಳನ್ನು ಕಾಪಾಡಿಕೊಳ್ಳಲು ಏನನ್ನಾದರೂ ಕಳೆದುಕೊಳ್ಳಲು ಸಿದ್ಧವಿರುವ ಮಾರ್ಗರೇಟ್, ತಮ್ಮ ರಾಜಕೀಯ ಜೀವನದಲ್ಲಿ ಎಂದೂ ರಾಜಿ ಮಾಡಿಕೊಂಡವರಲ್ಲ.