ಪಕ್ಷದ ಧೀಮಂತ ನಾಯಕ ಚಾಂಡಿ ಅವರ ಕುರಿತು ಕೆಪಿಸಿಸಿ ಸಿದ್ಧಪಡಿಸಿರುವ ‘ಆರ್ದ್ರಮಾನಸ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಕ್ಷದ ಹಿರಿಯ ನಾಯಕರು, ‘ಚಾಂಡಿ ಅವರು ನಿಧನರಾದಾಗ ಅವರ ಅಂತಿಮ ಯಾತ್ರೆಯಲ್ಲಿ ಜನತೆಯು ಸಲ್ಲಿಸಿದ ಗೌರವವು, ಚಾಂಡಿಯವರ ಕೆಲಸ ಮತ್ತು ಜನರ ಮೇಲಿಟ್ಟಿದ್ದ ಪ್ರೀತಿ, ಕರುಣೆ ಎಂಥದ್ದು ಎನ್ನುವುದನ್ನು ತೋರಿಸಿತು’ ಎಂದು ಸ್ಮರಿಸಿದರು.