ಸಕ್ಸೇನಾ ಅವರನ್ನು ಮೇಧಾ ಅವರು ‘ಹೇಡಿ, ದೇಶಭಕ್ತ ಅಲ್ಲ’ ಎಂದು ಕರೆದಿದ್ದು ಹಾಗೂ ಅವರು ಹವಾಲಾ ವಹಿವಾಟಿನಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದು ಮಾನಹಾನಿಕರವಾಗಿದ್ದವು. ಅವು ಸಕ್ಸೇನಾ ಕುರಿತು ನಕಾರಾತ್ಮಕ ಚಿತ್ರಣ ಮೂಡಿಸುವಂತೆಯೂ ಇದ್ದವು ಎಂದು ನ್ಯಾಯಾಧೀಶರು ಹೇಳಿದ್ದಾರೆ. ಶಿಕ್ಷೆಯ ಪ್ರಮಾಣ ಕುರಿತು ವಾದ–ಪ್ರತಿವಾದ ಮೇ 30ಕ್ಕೆ ನಿಗದಿಯಾಗಿದೆ.