ಕಲ್ಲಕುರಿಚಿ ಜಿಲ್ಲಾಧಿಕಾರಿ ಸರವನ್ ಕುಮಾರ್ ಜಟಾವತ್ ಅವರು, ದೇಶದಾದ್ಯಂತ ಲೈಂಗಿಕ ಅಲ್ಪಸಂಖ್ಯಾತರು ಆಚರಿಸುವ ವಿಶ್ವಪ್ರಸಿದ್ಧ ‘ಕೂವಾಗಂ’ ಹಬ್ಬದ ಹಿನ್ನೆಲೆಯಲ್ಲಿ ಸಿದ್ಧತೆಗಳನ್ನು ಪರಿಶೀಲಿಸಲು ಕೂವಾಗಂ ಕುಥಂಡವರ್ ದೇಗುಲಕ್ಕೆ ಭೇಟಿ ನೀಡಿದ್ದರು. ದೇಗುಲ ಪ್ರವೇಶಕ್ಕೂ ಮೊದಲು ಶೂ ಕಳಚಿದ ಅವರು ಅದನ್ನು ಹಿಡಿದುಕೊಳ್ಳುವಂತೆ ಹೆಡ್ ಕಾನ್ಸ್ಟೆಬಲ್ಗೆ ತಿಳಿಸಿದರು ಎನ್ನಲಾಗಿದೆ. ಈ ದೃಶ್ಯಗಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.