ಪೊಲೀಸ್ ತನಿಖೆ ಪ್ರಕಾರ, ಜಯೇಶ್ ಅಕಾ ರಾಜು ಎಂಬವರು ತಾವು ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಅಹಮದಾಬಾದ್ನ ಗೋದಾಮಿನಿಂದ 600 ಲೀಟರ್ ಮಿಥೆನಾಲ್ ಕದ್ದು, ಅದನ್ನು ಬೋಟಾದ್ ಮೂಲದ ಸಂಬಂಧಿ ಸಂಜಯ್ ಎಂಬವರಿಗೆ ₹40,000ಕ್ಕೆ ಮಾರಾಟ ಮಾಡಿದ್ದರು. ಸಂಜಯ್ ಇದನ್ನು ಬೋಟಾದ್ ಹಲವು ಕಳ್ಳಬಟ್ಟಿ ತಯಾರಿಕರಿಗೆ ಮಾರಾಟ ಮಾಡಿದ್ದರು. ಇವರು ಕಳ್ಳಬಟ್ಟಿ ತಯಾರಿಸಿ ಗ್ರಾಮಸ್ಥರಿಗೆ ಮಾರಾಟ ಮಾಡಿದ್ದಾರೆ. ಇದು 28 ಜನರ ಸಾವಿಗೆ ಕಾರಣವಾಗಿದೆ ಎಂದು ಬಾಟಿಯಾ ತಿಳಿಸಿದ್ದಾರೆ.