ಈ ಕುರಿತು ವಿಚಾರಣೆ ನಡೆದ ನ್ಯಾಯಾಧೀಶ ಸ್ವರಣ ಕಾಂತಾ ಶರ್ಮಾ ಅವರು, ‘ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯರ ಹಕ್ಕುಗಳು ಮತ್ತು ಗೌರವಗಳನ್ನು ಎತ್ತಿಹಿಡಿಯುವುದು ನ್ಯಾಯಾಂಗದ ಹೊಣೆಗಾರಿಕೆಯಾಗಿದೆ. ಇಂಥ ಪ್ರಕರಣದಲ್ಲಿ ರಾಜೀ ಸಂಧಾನದ ಸಲಹೆಗಳು ನ್ಯಾಯಾಧೀಶರಿಂದಲೇ ಬರುವುದು ಅಪರಾಧ ನ್ಯಾಯಾಂಗ ವ್ಯವಸ್ಥೆ ಮತ್ತು ನಿಷ್ಪಕ್ಷಪಾತ ವಿಚಾರಣೆಯ ತತ್ವಗಳಿಗೆ ವಿರುದ್ಧವಾದದ್ದಾಗಿದೆ’ ಎಂದು ಹೇಳಿದರು.