<p><strong>ನವದೆಹಲಿ:</strong> ಸರ್ಕಾರಿ ಉದ್ಯೋಗದ ನೇಮಕಾತಿ ಪರೀಕ್ಷೆಗೆ ಬಂದ ನಕಲಿ ಅಭ್ಯರ್ಥಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. </p><p>ಸೋಮವಾರ ರಾಷ್ಟ್ರ ರಾಜಧಾನಿಯ ಗ್ರೇಟರ್ ಕೈಲಾಸ್ನ ಪರೀಕ್ಷಾ ಕೇಂದ್ರದಲ್ಲಿ ಘಟನೆ ಜರುಗಿದೆ. </p><p>ಜವಾಹರ್ ನವೋದಯ ವಿದ್ಯಾಲಯ(ಜೆಎನ್ವಿ) ಸಮಿತಿಯ ಅಡಿಯಲ್ಲಿ ಬರುವ ಜೂನಿಯರ್ ಸೆಕ್ರೆಟರಿಯೇಟ್ ಅಟೆಂಡೆಂಟ್ ಹುದ್ದೆಯ ಪರೀಕ್ಷೆಯ ವೇಳೆ ಅಂಕುರ್ ಎಂಬ ಅಭ್ಯರ್ಥಿಯ ಬದಲಿಗೆ ನಕಲಿ ಅಭ್ಯರ್ಥಿಯು ಪರೀಕ್ಷೆಗೆ ಹಾಜರಾಗಿದ್ದಾನೆ ಎಂದು ಪೊಲೀಸರು ತಿಳಿಸಿದರು.</p><p>ಘಟನೆಗೆ ಸಂಬಂಧಿಸಿದಂತೆ ಪರೀಕ್ಷೆಯ ವೇಳೆ ಲೋಪ ಹಾಗೂ ನಕಲಿ ಅಭ್ಯರ್ಥಿ ಸುಮಿತ್ ದಹಿಯಾ(29)ಗೆ ಸಹಕಾರ ನೀಡಿದ ಆರೋಪದ ಮೇಲೆ ಶಾಲಾ ಶಿಕ್ಷಕ ಬಿಮಲ್ ಕುಮಾರ್ ಸಿಂಗ್(59), ಕಚೇರಿ ಅಧೀಕ್ಷಕ ಬಲ್ಜೀತ್ ಸಿಂಗ್(50) ಹಾಗೂ 40 ವರ್ಷದ ಒರ್ವ ಮಹಿಳೆಯನ್ನು ಬಂಧಿಸಲಾಗಿದೆ ಎಂದರು. </p><p>ವಿಚಾರಣೆಯ ವೇಳೆ, ಅಂಕುರ್ ಬದಲಿಗೆ ನಕಲಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆಯಲು ಮಧ್ಯವರ್ತಿಗಳಿಂದ ₹6 ಲಕ್ಷ ಪಡೆದಿರುವುದಾಗಿ ನಕಲಿ ಅಭ್ಯರ್ಥಿ ಸುಮಿತ್ ದಹಿಯಾ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದರು. </p><p>ನಕಲಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರದ ಸಿಬ್ಬಂದಿಗಳ ಜೊತೆ ನಿಕಟ ಸಂಪರ್ಕವಿದ್ದ ಮಹಿಳೆಯ ಸಹಾಯವನ್ನು ಪಡೆಯಲಾಗಿದೆ ಎಂದರು.</p><p>ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಸರ್ಕಾರಿ ಉದ್ಯೋಗದ ನೇಮಕಾತಿ ಪರೀಕ್ಷೆಗೆ ಬಂದ ನಕಲಿ ಅಭ್ಯರ್ಥಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. </p><p>ಸೋಮವಾರ ರಾಷ್ಟ್ರ ರಾಜಧಾನಿಯ ಗ್ರೇಟರ್ ಕೈಲಾಸ್ನ ಪರೀಕ್ಷಾ ಕೇಂದ್ರದಲ್ಲಿ ಘಟನೆ ಜರುಗಿದೆ. </p><p>ಜವಾಹರ್ ನವೋದಯ ವಿದ್ಯಾಲಯ(ಜೆಎನ್ವಿ) ಸಮಿತಿಯ ಅಡಿಯಲ್ಲಿ ಬರುವ ಜೂನಿಯರ್ ಸೆಕ್ರೆಟರಿಯೇಟ್ ಅಟೆಂಡೆಂಟ್ ಹುದ್ದೆಯ ಪರೀಕ್ಷೆಯ ವೇಳೆ ಅಂಕುರ್ ಎಂಬ ಅಭ್ಯರ್ಥಿಯ ಬದಲಿಗೆ ನಕಲಿ ಅಭ್ಯರ್ಥಿಯು ಪರೀಕ್ಷೆಗೆ ಹಾಜರಾಗಿದ್ದಾನೆ ಎಂದು ಪೊಲೀಸರು ತಿಳಿಸಿದರು.</p><p>ಘಟನೆಗೆ ಸಂಬಂಧಿಸಿದಂತೆ ಪರೀಕ್ಷೆಯ ವೇಳೆ ಲೋಪ ಹಾಗೂ ನಕಲಿ ಅಭ್ಯರ್ಥಿ ಸುಮಿತ್ ದಹಿಯಾ(29)ಗೆ ಸಹಕಾರ ನೀಡಿದ ಆರೋಪದ ಮೇಲೆ ಶಾಲಾ ಶಿಕ್ಷಕ ಬಿಮಲ್ ಕುಮಾರ್ ಸಿಂಗ್(59), ಕಚೇರಿ ಅಧೀಕ್ಷಕ ಬಲ್ಜೀತ್ ಸಿಂಗ್(50) ಹಾಗೂ 40 ವರ್ಷದ ಒರ್ವ ಮಹಿಳೆಯನ್ನು ಬಂಧಿಸಲಾಗಿದೆ ಎಂದರು. </p><p>ವಿಚಾರಣೆಯ ವೇಳೆ, ಅಂಕುರ್ ಬದಲಿಗೆ ನಕಲಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆಯಲು ಮಧ್ಯವರ್ತಿಗಳಿಂದ ₹6 ಲಕ್ಷ ಪಡೆದಿರುವುದಾಗಿ ನಕಲಿ ಅಭ್ಯರ್ಥಿ ಸುಮಿತ್ ದಹಿಯಾ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದರು. </p><p>ನಕಲಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರದ ಸಿಬ್ಬಂದಿಗಳ ಜೊತೆ ನಿಕಟ ಸಂಪರ್ಕವಿದ್ದ ಮಹಿಳೆಯ ಸಹಾಯವನ್ನು ಪಡೆಯಲಾಗಿದೆ ಎಂದರು.</p><p>ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>