<p><strong>ಡುಂಗರಪುರ(ರಾಜಸ್ಥಾನ):</strong> ಬುಡಕಟ್ಟು ಸಮುದಾಯದವರೇ ಪ್ರಧಾನವಾಗಿರುವ ರಾಜಸ್ಥಾನದ ಡುಂಗರಪುರ ಜಿಲ್ಲೆಯಲ್ಲಿರುವ ‘ಕಡಿಮೆ ವೆಚ್ಚದ ಮಳೆ ನೀರು ಸಂಗ್ರಹ ವಿಧಾನ‘ವನ್ನು ದೆಹಲಿಯಾದ್ಯಂತ ಅಳವಡಿಸಲು ಮುಂದಾಗಿರುವುದಾಗಿ ದೆಹಲಿ ಸರ್ಕಾರದ ಜಲ ಸಚಿವ ಸತ್ಯೇಂದರ್ ಜೈನ್ ತಿಳಿಸಿದ್ದಾರೆ.</p>.<p>ಜೈನ್ ನೇತೃತ್ವದ ಏಳು ಸದಸ್ಯರನ್ನೊಳಗೊಂಡ ತಂಡಇತ್ತೀಚೆಗೆ ಡುಂಗಾರಪುರ ಜಿಲ್ಲೆಗೆ ಭೇಟಿ ನೀಡಿ, ಅಲ್ಲಿನ ಮನೆಗಳಲ್ಲಿ ಅಳವಡಿಸಿಕೊಂಡಿರುವ ಕಡಿಮೆ ವೆಚ್ಚದ ಮಳೆ ನೀರು ಸಂಗ್ರಹ ವಿಧಾನವನ್ನು ವೀಕ್ಷಿಸಿದೆ.</p>.<p>ಸಾಂಪ್ರದಾಯಿಕ ವಿಧಾನದಲ್ಲಿಮಳೆ ನೀರು ಸಂಗ್ರಹ ವಿಧಾನ ಅಳವಡಿಸಲು ಪ್ರತಿ ಮನೆಗೆ ₹50ಸಾವಿರ ರಿಂದ ₹1 ಲಕ್ಷ ವೆಚ್ಚವಾಗುತ್ತದೆ. ಆದರೆ ಈ ಡುಂಗರಪುರದಲ್ಲಿ ಅಳವಡಿಸಿರುವ ಮಾದರಿಗೆ ₹16 ಸಾವಿರ ವೆಚ್ಚವಾಗುತ್ತದೆ.</p>.<p>ಡುಂಗರಪುರ ಮಾದರಿ ಒಂದು ನವೀನ ಕಲ್ಪನೆಯಾಗಿದೆ. ಈ ವಿಧಾನದಲ್ಲಿ ಮಳೆ ನೀರು ಸಂಗ್ರಹವಾಗಿ, ಹೆಚ್ಚಾದ ನೀರನ್ನು ಹೊರಗೆ ಹರಿಸುವ ಬದಲು, ಕೊಳವೆಬಾವಿಗೆ ತಿರುಗಿಸಿ, ನೀರು ಇಂಗಿಸಬಹುದು.</p>.<p>‘ಇದು ಕ್ಲೋಸ್ ಲೂಪ್ ವ್ಯವಸ್ಥೆ. ಕೆಲವು ಮನೆಗಳಲ್ಲಿ ಮನೆಯ ಚಾವಣಿಯಲ್ಲಿ ಸಂಗ್ರಹಿಸಿದ ಮಳೆನೀರನ್ನು ಈಗಾಗಲೇ ಅಸ್ತಿತ್ವದಲ್ಲಿರುವ ಕೊಳವೆಬಾವಿಗಳಿಗೆ ಸೇರುವಂತೆ ಮಾಡಿದ್ದಾರೆ. ಕೊಳವೆಯಲ್ಲಿಯೇ ಮರಳು ಶೋಧಕಗಳನ್ನು ಅಳವಡಿಸಿದ್ದಾರೆ‘ ಎಂದು ಹೇಳಿದರು.</p>.<p>ಡುಂಗಾರ್ ಮುನ್ಸಿಪಲ್ ಕೌನ್ಸಿಲ್ನ ಅಧ್ಯಕ್ಷ ಕೆ ಕೆ ಗುಪ್ತಾ ಅವರು ಮೊದಲು ಈ ಬಗ್ಗೆ ಹೇಳಿದಾಗ ಅವರು ಮಾದರಿಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರಿಂದ ಈ ವ್ಯವಸ್ಥೆಯನ್ನು ಸ್ವತಃ ವೀಕ್ಷಿಸಲು ಬಯಸುತ್ತೇನೆ ಎಂದು ಜೈನ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಡುಂಗರಪುರ(ರಾಜಸ್ಥಾನ):</strong> ಬುಡಕಟ್ಟು ಸಮುದಾಯದವರೇ ಪ್ರಧಾನವಾಗಿರುವ ರಾಜಸ್ಥಾನದ ಡುಂಗರಪುರ ಜಿಲ್ಲೆಯಲ್ಲಿರುವ ‘ಕಡಿಮೆ ವೆಚ್ಚದ ಮಳೆ ನೀರು ಸಂಗ್ರಹ ವಿಧಾನ‘ವನ್ನು ದೆಹಲಿಯಾದ್ಯಂತ ಅಳವಡಿಸಲು ಮುಂದಾಗಿರುವುದಾಗಿ ದೆಹಲಿ ಸರ್ಕಾರದ ಜಲ ಸಚಿವ ಸತ್ಯೇಂದರ್ ಜೈನ್ ತಿಳಿಸಿದ್ದಾರೆ.</p>.<p>ಜೈನ್ ನೇತೃತ್ವದ ಏಳು ಸದಸ್ಯರನ್ನೊಳಗೊಂಡ ತಂಡಇತ್ತೀಚೆಗೆ ಡುಂಗಾರಪುರ ಜಿಲ್ಲೆಗೆ ಭೇಟಿ ನೀಡಿ, ಅಲ್ಲಿನ ಮನೆಗಳಲ್ಲಿ ಅಳವಡಿಸಿಕೊಂಡಿರುವ ಕಡಿಮೆ ವೆಚ್ಚದ ಮಳೆ ನೀರು ಸಂಗ್ರಹ ವಿಧಾನವನ್ನು ವೀಕ್ಷಿಸಿದೆ.</p>.<p>ಸಾಂಪ್ರದಾಯಿಕ ವಿಧಾನದಲ್ಲಿಮಳೆ ನೀರು ಸಂಗ್ರಹ ವಿಧಾನ ಅಳವಡಿಸಲು ಪ್ರತಿ ಮನೆಗೆ ₹50ಸಾವಿರ ರಿಂದ ₹1 ಲಕ್ಷ ವೆಚ್ಚವಾಗುತ್ತದೆ. ಆದರೆ ಈ ಡುಂಗರಪುರದಲ್ಲಿ ಅಳವಡಿಸಿರುವ ಮಾದರಿಗೆ ₹16 ಸಾವಿರ ವೆಚ್ಚವಾಗುತ್ತದೆ.</p>.<p>ಡುಂಗರಪುರ ಮಾದರಿ ಒಂದು ನವೀನ ಕಲ್ಪನೆಯಾಗಿದೆ. ಈ ವಿಧಾನದಲ್ಲಿ ಮಳೆ ನೀರು ಸಂಗ್ರಹವಾಗಿ, ಹೆಚ್ಚಾದ ನೀರನ್ನು ಹೊರಗೆ ಹರಿಸುವ ಬದಲು, ಕೊಳವೆಬಾವಿಗೆ ತಿರುಗಿಸಿ, ನೀರು ಇಂಗಿಸಬಹುದು.</p>.<p>‘ಇದು ಕ್ಲೋಸ್ ಲೂಪ್ ವ್ಯವಸ್ಥೆ. ಕೆಲವು ಮನೆಗಳಲ್ಲಿ ಮನೆಯ ಚಾವಣಿಯಲ್ಲಿ ಸಂಗ್ರಹಿಸಿದ ಮಳೆನೀರನ್ನು ಈಗಾಗಲೇ ಅಸ್ತಿತ್ವದಲ್ಲಿರುವ ಕೊಳವೆಬಾವಿಗಳಿಗೆ ಸೇರುವಂತೆ ಮಾಡಿದ್ದಾರೆ. ಕೊಳವೆಯಲ್ಲಿಯೇ ಮರಳು ಶೋಧಕಗಳನ್ನು ಅಳವಡಿಸಿದ್ದಾರೆ‘ ಎಂದು ಹೇಳಿದರು.</p>.<p>ಡುಂಗಾರ್ ಮುನ್ಸಿಪಲ್ ಕೌನ್ಸಿಲ್ನ ಅಧ್ಯಕ್ಷ ಕೆ ಕೆ ಗುಪ್ತಾ ಅವರು ಮೊದಲು ಈ ಬಗ್ಗೆ ಹೇಳಿದಾಗ ಅವರು ಮಾದರಿಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರಿಂದ ಈ ವ್ಯವಸ್ಥೆಯನ್ನು ಸ್ವತಃ ವೀಕ್ಷಿಸಲು ಬಯಸುತ್ತೇನೆ ಎಂದು ಜೈನ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>