<p><strong>ನವದೆಹಲಿ: ‘</strong>ವಂಶಾಡಳಿತ ಭ್ರಷ್ಟಾಚಾರ’ ದೇಶಕ್ಕೆ ದೊಡ್ಡ ಸವಾಲಾಗಿದೆ,' ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ. ಅಲ್ಲದೆ, 'ಇದು ಅನೇಕ ರಾಜ್ಯಗಳಲ್ಲಿ ರಾಜಕೀಯ ಸಂಪ್ರದಾಯದ ಒಂದು ಭಾಗವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.</p>.<p>‘ಜಾಗರೂಕತೆ ಮತ್ತು ಭ್ರಷ್ಟಚಾರ ವಿರೋಧ’ದ ಕುರಿತ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಧಾನಿ ಮಂಗಳವಾರ ಮಾತನಾಡಿದರು. ‘ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ವರ್ಗಾವಣೆಗೊಳ್ಳುತ್ತಿರುವ ಭ್ರಷ್ಟಾಚಾರವು ದೇಶವನ್ನು ಟೊಳ್ಳಾಗಿಸಿದೆ,’ ಎಂದು ಅವರು ಅಭಿಪ್ರಾಯಪಟ್ಟರು.</p>.<p>‘ಇಂದು ನಾನು ನಿಮ್ಮ ಮುಂದೆ ಮತ್ತೊಂದು ದೊಡ್ಡ ಸವಾಲನ್ನು ಪ್ರಸ್ತಾಪಿಸಲಿದ್ದೇನೆ. ಈ ಸವಾಲು ಕಳೆದ ದಶಕಗಳಲ್ಲಿ ಕ್ರಮೇಣ ಬೆಳೆಯುತ್ತಾ ಬಂದಿದೆ. ದೇಶದಲ್ಲಿ ಅಸಾಧಾರಣ ರೂಪವವನ್ನೂ ಪಡೆದುಕೊಂಡಿದೆ. ಅದು ವಂಶಾಡಳಿತ ಭ್ರಷ್ಟಾಚಾರದ ಸವಾಲು. ಅಂದರೆ ಭ್ರಷ್ಟಾಚಾರವನ್ನು, ಒಂದು ಪೀಳಿಗೆಯವರು ಮತ್ತೊಂದು ತಲೆಮಾರಿನವರಿಗೆ ವರ್ಗಾಯಿಸುತ್ತಿದ್ದಾರೆ,’ ಎಂದು ಮೋದಿ ಹೇಳಿದರು.</p>.<p>‘ಕಳೆದ ದಶಕಗಳಲ್ಲಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಒಂದು ತಲೆಮಾರಿನವರು ಶಿಕ್ಷೆಯಿಂದ ಪಾರಾಗಿದ್ದಾರೆ. ಮುಂದಿನ ಪೀಳಿಗೆಯವರು ಇಂತಹ ಕೃತ್ಯಗಳನ್ನು ಮಾಡುವಲ್ಲಿ ಲಜ್ಜಾಹೀನರಾಗಿದ್ದಾರೆ. ಮನೆಯಲ್ಲಿ ಕುಳಿತೇ ಕೋಟಿ ರೂಪಾಯಿಗಳನ್ನು ಸಂಪಾದಿಸಿದರೂ ಏನೂ ಆಗದಿದ್ದಾಗ, ಅತನ ಆತ್ಮವಿಶ್ವಾಸವು ಮತ್ತಷ್ಟು ಹೆಚ್ಚಾಗುತ್ತದೆ’ ಎಂದು ಮೋದಿ ಹಿಂದಿ ಭಾಷಣದಲ್ಲಿ ಹೇಳಿದರು.</p>.<p>ಭ್ರಷ್ಟಾಚಾರದ ತಡೆಗೆ ವ್ಯವಸ್ಥಿತ ತಪಾಸಣೆ, ಪರಿಣಾಮಕಾರಿ ಲೆಕ್ಕಪರಿಶೋಧನೆ, ಸಾಮರ್ಥ್ಯ ವೃದ್ಧಿ, ತರಬೇತಿಯ ಅಗತ್ಯವಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.</p>.<p>‘ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಯಾವುದೇ ಒಂದು ಸಂಸ್ಥೆಯ ಕೆಲಸವಲ್ಲ. ಆದರೆ ಅದು ಸಾಮೂಹಿಕ ಜವಾಬ್ದಾರಿಯಾಗಿದೆ’ ಎಂದು ಅವರು ಇದೇ ವೇಳೆ ಹೇಳಿದರು.</p>.<p>ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಸಿಬಿಐ ಆಯೋಜಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: ‘</strong>ವಂಶಾಡಳಿತ ಭ್ರಷ್ಟಾಚಾರ’ ದೇಶಕ್ಕೆ ದೊಡ್ಡ ಸವಾಲಾಗಿದೆ,' ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ. ಅಲ್ಲದೆ, 'ಇದು ಅನೇಕ ರಾಜ್ಯಗಳಲ್ಲಿ ರಾಜಕೀಯ ಸಂಪ್ರದಾಯದ ಒಂದು ಭಾಗವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.</p>.<p>‘ಜಾಗರೂಕತೆ ಮತ್ತು ಭ್ರಷ್ಟಚಾರ ವಿರೋಧ’ದ ಕುರಿತ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಧಾನಿ ಮಂಗಳವಾರ ಮಾತನಾಡಿದರು. ‘ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ವರ್ಗಾವಣೆಗೊಳ್ಳುತ್ತಿರುವ ಭ್ರಷ್ಟಾಚಾರವು ದೇಶವನ್ನು ಟೊಳ್ಳಾಗಿಸಿದೆ,’ ಎಂದು ಅವರು ಅಭಿಪ್ರಾಯಪಟ್ಟರು.</p>.<p>‘ಇಂದು ನಾನು ನಿಮ್ಮ ಮುಂದೆ ಮತ್ತೊಂದು ದೊಡ್ಡ ಸವಾಲನ್ನು ಪ್ರಸ್ತಾಪಿಸಲಿದ್ದೇನೆ. ಈ ಸವಾಲು ಕಳೆದ ದಶಕಗಳಲ್ಲಿ ಕ್ರಮೇಣ ಬೆಳೆಯುತ್ತಾ ಬಂದಿದೆ. ದೇಶದಲ್ಲಿ ಅಸಾಧಾರಣ ರೂಪವವನ್ನೂ ಪಡೆದುಕೊಂಡಿದೆ. ಅದು ವಂಶಾಡಳಿತ ಭ್ರಷ್ಟಾಚಾರದ ಸವಾಲು. ಅಂದರೆ ಭ್ರಷ್ಟಾಚಾರವನ್ನು, ಒಂದು ಪೀಳಿಗೆಯವರು ಮತ್ತೊಂದು ತಲೆಮಾರಿನವರಿಗೆ ವರ್ಗಾಯಿಸುತ್ತಿದ್ದಾರೆ,’ ಎಂದು ಮೋದಿ ಹೇಳಿದರು.</p>.<p>‘ಕಳೆದ ದಶಕಗಳಲ್ಲಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಒಂದು ತಲೆಮಾರಿನವರು ಶಿಕ್ಷೆಯಿಂದ ಪಾರಾಗಿದ್ದಾರೆ. ಮುಂದಿನ ಪೀಳಿಗೆಯವರು ಇಂತಹ ಕೃತ್ಯಗಳನ್ನು ಮಾಡುವಲ್ಲಿ ಲಜ್ಜಾಹೀನರಾಗಿದ್ದಾರೆ. ಮನೆಯಲ್ಲಿ ಕುಳಿತೇ ಕೋಟಿ ರೂಪಾಯಿಗಳನ್ನು ಸಂಪಾದಿಸಿದರೂ ಏನೂ ಆಗದಿದ್ದಾಗ, ಅತನ ಆತ್ಮವಿಶ್ವಾಸವು ಮತ್ತಷ್ಟು ಹೆಚ್ಚಾಗುತ್ತದೆ’ ಎಂದು ಮೋದಿ ಹಿಂದಿ ಭಾಷಣದಲ್ಲಿ ಹೇಳಿದರು.</p>.<p>ಭ್ರಷ್ಟಾಚಾರದ ತಡೆಗೆ ವ್ಯವಸ್ಥಿತ ತಪಾಸಣೆ, ಪರಿಣಾಮಕಾರಿ ಲೆಕ್ಕಪರಿಶೋಧನೆ, ಸಾಮರ್ಥ್ಯ ವೃದ್ಧಿ, ತರಬೇತಿಯ ಅಗತ್ಯವಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.</p>.<p>‘ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಯಾವುದೇ ಒಂದು ಸಂಸ್ಥೆಯ ಕೆಲಸವಲ್ಲ. ಆದರೆ ಅದು ಸಾಮೂಹಿಕ ಜವಾಬ್ದಾರಿಯಾಗಿದೆ’ ಎಂದು ಅವರು ಇದೇ ವೇಳೆ ಹೇಳಿದರು.</p>.<p>ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಸಿಬಿಐ ಆಯೋಜಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>