ಜೈಪುರ: ರಾಜಸ್ಥಾನದಲ್ಲಿ ನಡೆದಿದೆ ಎನ್ನಲಾದ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ED) ಐದು ಜನರನ್ನು ಬಂಧಿಸಿದೆ.
ಸುರೇಶ್ ಕುಮಾರ್, ವಿಜಯ ದಾಮೋರೆ, ಪುಖರಾಜ್, ಪೀರರಾಮ್ ಮತ್ತು ಅರುಣ್ ಶರ್ಮಾ ಬಂಧಿತ ಆರೋಪಿಗಳು. ಹಣ ಅಕ್ರಮ ವರ್ಗಾವಣೆ ಆರೋಪ ಇವರ ಮೇಲಿದೆ.
ಹಿರಿಯ ಶಿಕ್ಷಕರಿಗೆ ನಡೆಸುವ 2ನೇ ಗ್ರೇಡ್ನ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಹಗರಣ ಇದಾಗಿದೆ. ಬಂಧಿತರನ್ನು ವಿಶೇಷ ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು. ಆರೋಪಿಗಳನ್ನು 3 ದಿನಗಳ ಅವಧಿಗೆ ED ವಶಕ್ಕೆ ನೀಡಲಾಗಿದೆ.