ಮೇ 5ರಂದು ದೆಹಲಿ ಪೊಲೀಸರು ಆಮ್ಲಜನಕ ಕಾನ್ಸನ್ಟ್ರೇಟರ್ಗಳ ಅಕ್ರಮ ದಾಸ್ತಾನು ಪ್ರಕರಣದಡಿ ಕಾಲ್ರಾ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಅಲ್ಲದೆ ಕಾಲ್ರಾಗೆ ಸಂಬಂಧಿಸಿದ ರೆಸ್ಟೊರೆಂಟ್ ಮತ್ತು ಸ್ಥಳಗಳಲ್ಲಿ ದಾಳಿ ನಡೆಸಿದ್ದರು.ಈ ವೇಳೆ 500 ಕ್ಕೂ ಹೆಚ್ಚು ಆಮ್ಲಜನಕ ಕಾನ್ಸನ್ಟ್ರೇಟರ್ಗಳನ್ನು ವಶಕ್ಕೆ ಪಡೆಯಲಾಗಿತ್ತು. ಇದನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪವು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಇಡಿಯು ಪಿಎಂಎಲ್ಎ ಕಾಯ್ದೆಯಡಿ ಕಾಲ್ರಾ ಮತ್ತು ಇತರರ ವಿರುದ್ಧ ದೂರ ದಾಖಲಿಸಿದೆ.