<p>ತಿರುವನಂತಪುರ: ಸಾಮಾಜಿಕ ಕಾರ್ಯಕರ್ತೆ ದಯಾ ಬಾಯಿ ಮತ್ತು ಎಂಡೋಸಲ್ಫಾನ್ ಸಂತ್ರಸ್ತರ ತಾಯಂದಿರು ಐದು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆ ಭಾನುವಾರ ಮುಕ್ತಾಯಗೊಂಡಿದೆ. ಸಂತ್ರಸ್ತರ ಬೇಡಿಕೆಗಳನ್ನು ಈಡೇರಿಸುವುದಾಗಿ ಕೇರಳ ಸರ್ಕಾರ ಭರವಸೆ ನೀಡಿದ ನಂತರ ಪ್ರತಿಭಟನೆ ಅಂತ್ಯಗೊಳಿಸಲಾಯಿತು.</p>.<p>2017ರಲ್ಲಿ ಎಂಡೋಸಲ್ಫಾನ್ನಿಂದ ತೊಂದರೆಗೊಳಗಾದ 1905 ವ್ಯಕ್ತಿಗಳ ಪೈಕಿ, ಮಕ್ಕಳನ್ನೂ ಸಂತ್ರಸ್ತರ ಪಟ್ಟಿಯಲ್ಲಿ ಅಧಿಕೃತವಾಗಿ ಸೇರಿಸಲು ಕೇರಳ ಸರ್ಕಾರ ಒಪ್ಪಿದೆ. ಈ ಕುರಿತು ಜಿಲ್ಲಾಧಿಕಾರಿ ಪ್ರಾಥಮಿಕ ಪರಿಶೀಲನೆ ನಡೆಸಲಿದ್ದಾರೆ. ಪಂಚಾಯ್ತಿ ವ್ಯಾಪ್ತಿಯನ್ನು ಗಣನೆಗೆ ತೆಗೆದುಕೊಳ್ಳದೆ ಎಂಡೋಸಲ್ಫಾನ್ ಪೀಡಿತವಾಗಿರುವ ಇಡೀ ಪ್ರದೇಶದಲ್ಲಿನ ಸಂತ್ರಸ್ತರನ್ನು ಪಟ್ಟಿಗೆ ಸೇರಿಸಲು ಸಮ್ಮತಿ ನೀಡಲಾಗಿದೆ.</p>.<p><strong>ವಿವಾದ ಸೃಷ್ಟಿಸಿದ ಸಚಿವೆ</strong><br />‘ಎಂಡೋಸಲ್ಫಾನ್ ಸಂತ್ರಸ್ತರು, ಮಾನಸಿಕ ಮತ್ತು ದೈಹಿಕ ವೈಕಲ್ಯಕ್ಕೆ ತುತ್ತಾದ ತಮ್ಮ ಮಕ್ಕಳನ್ನು ಸಚಿವಾಲಯ ಕಚೇರಿ ಎದುರು ಕರೆದುಕೊಂಡು ಬಂದು ಸಾಲಾಗಿ ನಿಲ್ಲಿಸಲಿ’ ಎಂದು ಹೇಳುವ ಮೂಲಕ ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ವಿವಾದ ಸೃಷ್ಟಿಸಿದ್ದಾರೆ.</p>.<p>ಸಚಿವೆಯ ಹೇಳಿಕೆಗೆ ಹೋರಾಟಗಾರರು, ವಿವಿಧ ರಾಜಕೀಯ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>‘ಅಂಗವಿಕಲ ಮಕ್ಕಳನ್ನು ಸಚಿವಾಲಯ ಕಚೇರಿಗೆ ಕರೆದುಕೊಂಡು ಬರಲಿ ಎಂದು ಸಚಿವೆ ಹೇಳಿರುವುದು ದುರದೃಷ್ಟಕರ. ಇದು ಸಂತ್ರಸ್ತರ ಅಸಹಾಯಕತೆಯನ್ನು ಅಣಕಿಸುವ ಮಾತು’ ಎಂದು ಹೋರಾಟಗಾರ್ತಿ ಸೋನಿಯಾ ಜಾರ್ಜ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಿರುವನಂತಪುರ: ಸಾಮಾಜಿಕ ಕಾರ್ಯಕರ್ತೆ ದಯಾ ಬಾಯಿ ಮತ್ತು ಎಂಡೋಸಲ್ಫಾನ್ ಸಂತ್ರಸ್ತರ ತಾಯಂದಿರು ಐದು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆ ಭಾನುವಾರ ಮುಕ್ತಾಯಗೊಂಡಿದೆ. ಸಂತ್ರಸ್ತರ ಬೇಡಿಕೆಗಳನ್ನು ಈಡೇರಿಸುವುದಾಗಿ ಕೇರಳ ಸರ್ಕಾರ ಭರವಸೆ ನೀಡಿದ ನಂತರ ಪ್ರತಿಭಟನೆ ಅಂತ್ಯಗೊಳಿಸಲಾಯಿತು.</p>.<p>2017ರಲ್ಲಿ ಎಂಡೋಸಲ್ಫಾನ್ನಿಂದ ತೊಂದರೆಗೊಳಗಾದ 1905 ವ್ಯಕ್ತಿಗಳ ಪೈಕಿ, ಮಕ್ಕಳನ್ನೂ ಸಂತ್ರಸ್ತರ ಪಟ್ಟಿಯಲ್ಲಿ ಅಧಿಕೃತವಾಗಿ ಸೇರಿಸಲು ಕೇರಳ ಸರ್ಕಾರ ಒಪ್ಪಿದೆ. ಈ ಕುರಿತು ಜಿಲ್ಲಾಧಿಕಾರಿ ಪ್ರಾಥಮಿಕ ಪರಿಶೀಲನೆ ನಡೆಸಲಿದ್ದಾರೆ. ಪಂಚಾಯ್ತಿ ವ್ಯಾಪ್ತಿಯನ್ನು ಗಣನೆಗೆ ತೆಗೆದುಕೊಳ್ಳದೆ ಎಂಡೋಸಲ್ಫಾನ್ ಪೀಡಿತವಾಗಿರುವ ಇಡೀ ಪ್ರದೇಶದಲ್ಲಿನ ಸಂತ್ರಸ್ತರನ್ನು ಪಟ್ಟಿಗೆ ಸೇರಿಸಲು ಸಮ್ಮತಿ ನೀಡಲಾಗಿದೆ.</p>.<p><strong>ವಿವಾದ ಸೃಷ್ಟಿಸಿದ ಸಚಿವೆ</strong><br />‘ಎಂಡೋಸಲ್ಫಾನ್ ಸಂತ್ರಸ್ತರು, ಮಾನಸಿಕ ಮತ್ತು ದೈಹಿಕ ವೈಕಲ್ಯಕ್ಕೆ ತುತ್ತಾದ ತಮ್ಮ ಮಕ್ಕಳನ್ನು ಸಚಿವಾಲಯ ಕಚೇರಿ ಎದುರು ಕರೆದುಕೊಂಡು ಬಂದು ಸಾಲಾಗಿ ನಿಲ್ಲಿಸಲಿ’ ಎಂದು ಹೇಳುವ ಮೂಲಕ ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ವಿವಾದ ಸೃಷ್ಟಿಸಿದ್ದಾರೆ.</p>.<p>ಸಚಿವೆಯ ಹೇಳಿಕೆಗೆ ಹೋರಾಟಗಾರರು, ವಿವಿಧ ರಾಜಕೀಯ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>‘ಅಂಗವಿಕಲ ಮಕ್ಕಳನ್ನು ಸಚಿವಾಲಯ ಕಚೇರಿಗೆ ಕರೆದುಕೊಂಡು ಬರಲಿ ಎಂದು ಸಚಿವೆ ಹೇಳಿರುವುದು ದುರದೃಷ್ಟಕರ. ಇದು ಸಂತ್ರಸ್ತರ ಅಸಹಾಯಕತೆಯನ್ನು ಅಣಕಿಸುವ ಮಾತು’ ಎಂದು ಹೋರಾಟಗಾರ್ತಿ ಸೋನಿಯಾ ಜಾರ್ಜ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>