ಹೈದರಾಬಾದ್ನ ನೆಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿ. ಹರಿಕೃಷ್ಣ ಪ್ರಸಾದ್ ಮತ್ತು ಐಆರ್ಟಿಎಸ್ ಅಧಿಕಾರಿ ಕೆ. ಸಾಂಬಶಿವ ರಾವ್ ಅವರನ್ನು ಇತರ ಆರೋಪಿಗಳೆಂದು ಸಿಐಡಿ ( ಅಪರಾಧ ತನಿಖಾ ವಿಭಾಗ) ಚಾರ್ಜ್ಶೀಟ್ನಲ್ಲಿ ಹೆಸರಿಸಿದೆ.
ಆಂಧ್ರಪ್ರದೇಶ ಫೈಬರ್ನೆಟ್ ಯೋಜನೆಯ ಹಂತ–1ರ ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ. ಇದರಿಂದ ರಾಜ್ಯ ಬೊಕ್ಕಸಕ್ಕೆ ₹330 ಕೋಟಿ ನಷ್ಟವಾಗಿದೆ ಎಂದು ಆರೋಪಿಸಲಾಗಿದೆ.
ಆರೋಪಿಗಳು ಸಹಚರರಿಗೆ ಸೇರಿದ ಕಂಪನಿಗಳ ಮೂಲಕ ಅಕ್ರಮವಾಗಿ ಹಣವನ್ನು ವರ್ಗಾವಣೆ ಮಾಡಿದ್ದಾರೆ ಎಂದು ಸಿಐಡಿ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಿಐಡಿ ತಿಳಿಸಿದೆ.