ಜೈಪುರ (ಪಿಟಿಐ): ‘ರಾಜಸ್ಥಾನದ ಬಿಕನೇರ್ ಜಿಲ್ಲೆಯ ಸಿಹಿ ತಿನಿಸಿನ ಅಂಗಡಿಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದ ಇಬ್ಬರು ಕಾರ್ಮಿಕರು ಮೃತಟ್ಟಿದ್ದಾರೆ’ ಎಂದು ಪೊಲೀಸರು ಮಂಗಳವಾರ ಹೇಳಿದ್ದಾರೆ.
‘ಜೈ ನಾರಾಯಣ ವ್ಯಾಸ ಕಾಲೋನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಅಂಗಡಿಯಲ್ಲಿ ಈ ಕಾರ್ಮಿಕರು ಸೋಮವಾರ ರಾತ್ರಿ ಮಲಗಿದ್ದ ವೇಳೆ ಶಾರ್ಟ್ ಸರ್ಕಿಟ್ ಸಂಭವಿಸಿದೆ’ ಎಂದು ಠಾಣಾಧಿಕಾರಿ ಮಹಾವೀರ್ ಪ್ರಸಾದ್ ಅವರು ತಿಳಿಸಿದ್ದಾರೆ.