ಸೋಮವಾರ ಸಭೆ ನಡೆಯುತ್ತಿದ್ದಾಗ ತೀರ್ಮಾನದ ಗೊಂದಲದ ನಿವಾರಣೆಗಾಗಿ ಮಾಜಿ ವಿಧಾನಸಭಾ ಸ್ಪೀಕರ್ ಪಿ. ಧನಪಾಲ್ ಅವರನ್ನು ಪರಿಗಣಿಸಬೇಕೆಂಬ ಅಭಿಪ್ರಾಯವೂ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿವ್ಯಕ್ತವಾಯಿತು. ಎಐಎಡಿಎಂಕೆ ಕಚೇರಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪನ್ನೀರ್ ಸೆಲ್ವಂ ಅವರ ಕಾರ್ಯವನ್ನು ಶ್ಲಾಘಿಸಿ ಕಾರ್ಯಕರ್ತರು ಕೆಲ ಭಿತ್ತಿಪತ್ರಗಳನ್ನೂ ಅಂಟಿಸಿ, ಅವರೇ ಪ್ರತಿಪಕ್ಷದ ನಾಯಕರಾಗಬೇಕು ಎಂದು ಒತ್ತಾಯಿಸಿದ್ದರು.