ಭಾರತದ ಶೆರ್ಪಾ ಅಮಿತಾಭ್ ಕಾಂತ್ ಅವರು ಈ ಸಭೆಗೆ ಚಾಲನೆ ನೀಡಿದರು. ‘ಜಗತ್ತು ಕೋವಿಡ್– 19 ಸಾಂಕ್ರಾಮಿಕದಿಂದ ಚೇತರಿಸಿಕೊಳ್ಳುತ್ತಿರುವ ಈ ಸಮಯದಲ್ಲಿ, ಎಲ್ಲರನ್ನೂ ಒಳಗೊಂಡ, ಚೇತರಿಸಿಕೊಳ್ಳುವ ಸಾಮರ್ಥ್ಯವುಳ್ಳ ಮತ್ತು ಸುಸ್ಥಿರ ಅಭಿವೃದ್ಧಿಗೆ ನಕ್ಷೆ ತಯಾರಿಸಬೇಕು. ಉತ್ತಮ ಜೀವನ ರೂಪಿಸುವ, ಉತ್ತಮ ಆರೋಗ್ಯ ಸೇವೆ ನೀಡುವ, ಜನಜೀವನ ಗುಣಮಟ್ಟ ಹೆಚ್ಚಿಸುವ ಕೆಲಸಕ್ಕೆ ವೇಗ ನೀಡಬೇಕು’ ಎಂದು ಅವರು ಹೇಳಿದರು.