<p>ಸಿಸ್ಸು (ಹಿಮಾಚಲ ಪ್ರದೇಶ):‘ಯಾವುದೇ ಪ್ರದೇಶದ ಮತಗಳನ್ನು ಗುರಿಯಾಗಿಟ್ಟುಕೊಂಡು ಸರ್ಕಾರ ಹೊಸ ಹೊಸ ಯೋಜನೆಗಳನ್ನು ಜಾರಿ ಮಾಡುತ್ತಿಲ್ಲ‘ ಎಂದು ಸ್ಪಷ್ಟಪಡಿಸಿದ ಪ್ರಧಾನಿ ನರೇಂದ್ರ ಮೋದಿಯವರು, ‘ಸರ್ಕಾರದ ಎಲ್ಲ ಯೋಜನೆಗಳು ಅಭಿವೃದ್ಧಿ ಕೇಂದ್ರೀಕೃತವಾಗಿವೆ‘ ಎಂದು ಪ್ರತಿಪಾದಿಸಿದರು.</p>.<p>ಇಲ್ಲಿನ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಅವರು, ‘ ಅಟಲ್ ಟನಲ್ ಯೋಜನೆ ಸರ್ಕಾರದ ಅಭಿವೃದ್ಧಿಯ ಒಂದು ಭಾಗ. ದೇಶದ ಪ್ರತಿಯೊಬ್ಬ ನಾಗರಿಕರೂ ಇದರ ಸೌಲಭ್ಯವನ್ನು ಪಡೆಯುತ್ತಾರೆ‘ ಎಂದು ವಿವರಿಸಿದರು.</p>.<p>ಹಿಂದಿನ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಒಮ್ಮೆ ಕೆದಕಿ ನೋಡಿ, ಆ ಸಮಯದಲ್ಲಿ ಇಲ್ಲಿನ ಲಹೌಲ್ – ಸ್ಪಿತಿ ಕಣಿವೆಯ ಜನರಿಗೆ ಯಾವುದೇ ಸೌಲಭ್ಯಗಳನ್ನು ಕಲ್ಪಿಸದೇ ನಿರ್ಲಕ್ಷ್ಯಿಸಿರುವುದು ಗೊತ್ತಾಗುತ್ತದೆ ಎಂದರು.</p>.<p>‘ಕೆಲವು ಜಿಲ್ಲೆಗಳಿಗೆ ಸರಿಯಾಗಿ ಸೌಲಭ್ಯಗಳು ತಲುಪಿಲ್ಲ. ಆದರೆ, ಈಗ ಹಾಗಿಲ್ಲ. ‘ಪ್ರತಿಯೊಬ್ಬರ ನೆರವಿನಿಂದ, ಎಲ್ಲರನ್ನೂ ವಿಶ್ವಾಸದೊಂದಿಗೆ ಎಲ್ಲರ ವಿಕಾಸ‘ ಎಂಬ ತತ್ವವನ್ನು ಅನುಸರಿಸಲಾಗುತ್ತಿದೆ‘ ಎಂದು ಮೋದಿ ಹೇಳಿದರು.</p>.<p>‘ದಲಿತರು, ಶೋಷಿತರು, ಸೌಲಭ್ಯವಂಚಿತರು, ಆದಿವಾಸಿಗಳು ಮತ್ತು ಎಲ್ಲರಿಗೂ ಮೂಲ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ‘ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಿಸ್ಸು (ಹಿಮಾಚಲ ಪ್ರದೇಶ):‘ಯಾವುದೇ ಪ್ರದೇಶದ ಮತಗಳನ್ನು ಗುರಿಯಾಗಿಟ್ಟುಕೊಂಡು ಸರ್ಕಾರ ಹೊಸ ಹೊಸ ಯೋಜನೆಗಳನ್ನು ಜಾರಿ ಮಾಡುತ್ತಿಲ್ಲ‘ ಎಂದು ಸ್ಪಷ್ಟಪಡಿಸಿದ ಪ್ರಧಾನಿ ನರೇಂದ್ರ ಮೋದಿಯವರು, ‘ಸರ್ಕಾರದ ಎಲ್ಲ ಯೋಜನೆಗಳು ಅಭಿವೃದ್ಧಿ ಕೇಂದ್ರೀಕೃತವಾಗಿವೆ‘ ಎಂದು ಪ್ರತಿಪಾದಿಸಿದರು.</p>.<p>ಇಲ್ಲಿನ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಅವರು, ‘ ಅಟಲ್ ಟನಲ್ ಯೋಜನೆ ಸರ್ಕಾರದ ಅಭಿವೃದ್ಧಿಯ ಒಂದು ಭಾಗ. ದೇಶದ ಪ್ರತಿಯೊಬ್ಬ ನಾಗರಿಕರೂ ಇದರ ಸೌಲಭ್ಯವನ್ನು ಪಡೆಯುತ್ತಾರೆ‘ ಎಂದು ವಿವರಿಸಿದರು.</p>.<p>ಹಿಂದಿನ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಒಮ್ಮೆ ಕೆದಕಿ ನೋಡಿ, ಆ ಸಮಯದಲ್ಲಿ ಇಲ್ಲಿನ ಲಹೌಲ್ – ಸ್ಪಿತಿ ಕಣಿವೆಯ ಜನರಿಗೆ ಯಾವುದೇ ಸೌಲಭ್ಯಗಳನ್ನು ಕಲ್ಪಿಸದೇ ನಿರ್ಲಕ್ಷ್ಯಿಸಿರುವುದು ಗೊತ್ತಾಗುತ್ತದೆ ಎಂದರು.</p>.<p>‘ಕೆಲವು ಜಿಲ್ಲೆಗಳಿಗೆ ಸರಿಯಾಗಿ ಸೌಲಭ್ಯಗಳು ತಲುಪಿಲ್ಲ. ಆದರೆ, ಈಗ ಹಾಗಿಲ್ಲ. ‘ಪ್ರತಿಯೊಬ್ಬರ ನೆರವಿನಿಂದ, ಎಲ್ಲರನ್ನೂ ವಿಶ್ವಾಸದೊಂದಿಗೆ ಎಲ್ಲರ ವಿಕಾಸ‘ ಎಂಬ ತತ್ವವನ್ನು ಅನುಸರಿಸಲಾಗುತ್ತಿದೆ‘ ಎಂದು ಮೋದಿ ಹೇಳಿದರು.</p>.<p>‘ದಲಿತರು, ಶೋಷಿತರು, ಸೌಲಭ್ಯವಂಚಿತರು, ಆದಿವಾಸಿಗಳು ಮತ್ತು ಎಲ್ಲರಿಗೂ ಮೂಲ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ‘ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>