ದರ್ಗಾ ಉಸ್ತುವಾರಿ ಘಸೀತ್ ರಾಮ್ ಸಲ್ಲಿಸಿದ ದೂರಿನ ಪ್ರಕಾರ, ‘ಭಾನುವಾರ ರಾತ್ರಿ 8:30ಕ್ಕೆ ಫಿರೋಜ್ ಗಾಂಧಿ ಕಾಲೋನಿಯಲ್ಲಿರುವ ಮನೆಗೆ ಹೊರಟಾಗ ಖಾಂಡ್ಸಾ ಗ್ರಾಮದ ದರ್ಗಾದಲ್ಲಿ ಎಲ್ಲವೂ ಸಾಮಾನ್ಯವಾಗಿತ್ತು. ಮಧ್ಯರಾತ್ರಿ 1.30ರ ಸುಮಾರಿಗೆ ಮಂದಿರ ಸಮೀಪ ವಾಸವಿರುವ ವ್ಯಕ್ತಿಯೊಬ್ಬರು ಕರೆ ಮಾಡಿ, ಕೆಲವರು ದರ್ಗಾಕ್ಕೆ ಬೆಂಕಿ ಹಚ್ಚಿದ್ದಾರೆ ಎಂದರು. ಜನರ ನೆರವಿನಿಂದ ಬೆಂಕಿ ಹತೋಟಿಗೆ ತರಲಾಯಿತು’ ಎಂದು ತಿಳಿಸಿದ್ದಾರೆ.