<p><strong>ಚಂಡೀಗಢ:</strong> ಸೋನಿಪತ್ನ ಖಾರ್ಖೋಡಾ ಪ್ರದೇಶದ ಕಾಲುವೆಯಲ್ಲಿ ಹರಿಯಾಣ ಮೂಲದ ಯುವತಿಯ ಶವವು ಪತ್ತೆಯಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದರು.</p>.<p>ಮಾಡೆಲ್ ಆಗಿದ್ದ ಶೀತಲ್ ಅಲಿಯಾಸ್ ಸಿಮ್ಮಿ ಶವ ಅದು ಎಂಬುದು ಗೊತ್ತಾಗಿದೆ. ಪಾಣಿಪತ್ನಲ್ಲಿ ಸಹೋದರಿಯೊಂದಿಗೆ ಈಕೆ ವಾಸವಾಗಿದ್ದರು. ಜೂ.14ರಂದು ಶೂಟಿಂಗ್ಗಾಗಿ ಹೊರಟಿದ್ದ ಶೀತಲ್, ಮನೆಗೆ ಹಿಂದಿರುಗಿರಲಿಲ್ಲ. ಶೀತಲ್ ಕಾಣೆಯಾಗಿದ್ದಾರೆಂದು ಅವರ ಕುಟುಂಬ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದರು. </p>.<p>ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಎಸಿಪಿ ಜೀತ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.</p>.<p>ಕಾಲುವೆಯಲ್ಲಿ ಕಾರೊಂದು ಪತ್ತೆಯಾಗಿದ್ದು, ಇದು ಪಾಣಿಪತ್ನ ಇಸ್ತಾನದ ವ್ಯಕ್ತಿಯದ್ದು ಎನ್ನಲಾಗಿದೆ. ಯುವತಿಯು ಆತನೊಂದಿಗೆ ಕಾರಿನಲ್ಲಿದ್ದಳು. ಆ ವ್ಯಕ್ತಿ ಈಜಿಕೊಂಡು ಕಾಲುವೆಯಿಂದ ಪಾರಾಗಿದ್ದಾನೆ. ಯುವತಿಯ ದೇಹದಲ್ಲಿ ಗಾಯದ ಗುರುತುಗಳಿವೆ. ಹೀಗಾಗಿ ಇದು ಕೊಲೆ ಎಂಬ ಅನುಮಾನವಿದೆ. ವಿಚಾರಣೆಗಾಗಿ ವ್ಯಕ್ತಿಯನ್ನು ಬಂಧಿಸಲಾಗುವುದು ಎಂದು ಅವರು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಂಡೀಗಢ:</strong> ಸೋನಿಪತ್ನ ಖಾರ್ಖೋಡಾ ಪ್ರದೇಶದ ಕಾಲುವೆಯಲ್ಲಿ ಹರಿಯಾಣ ಮೂಲದ ಯುವತಿಯ ಶವವು ಪತ್ತೆಯಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದರು.</p>.<p>ಮಾಡೆಲ್ ಆಗಿದ್ದ ಶೀತಲ್ ಅಲಿಯಾಸ್ ಸಿಮ್ಮಿ ಶವ ಅದು ಎಂಬುದು ಗೊತ್ತಾಗಿದೆ. ಪಾಣಿಪತ್ನಲ್ಲಿ ಸಹೋದರಿಯೊಂದಿಗೆ ಈಕೆ ವಾಸವಾಗಿದ್ದರು. ಜೂ.14ರಂದು ಶೂಟಿಂಗ್ಗಾಗಿ ಹೊರಟಿದ್ದ ಶೀತಲ್, ಮನೆಗೆ ಹಿಂದಿರುಗಿರಲಿಲ್ಲ. ಶೀತಲ್ ಕಾಣೆಯಾಗಿದ್ದಾರೆಂದು ಅವರ ಕುಟುಂಬ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದರು. </p>.<p>ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಎಸಿಪಿ ಜೀತ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.</p>.<p>ಕಾಲುವೆಯಲ್ಲಿ ಕಾರೊಂದು ಪತ್ತೆಯಾಗಿದ್ದು, ಇದು ಪಾಣಿಪತ್ನ ಇಸ್ತಾನದ ವ್ಯಕ್ತಿಯದ್ದು ಎನ್ನಲಾಗಿದೆ. ಯುವತಿಯು ಆತನೊಂದಿಗೆ ಕಾರಿನಲ್ಲಿದ್ದಳು. ಆ ವ್ಯಕ್ತಿ ಈಜಿಕೊಂಡು ಕಾಲುವೆಯಿಂದ ಪಾರಾಗಿದ್ದಾನೆ. ಯುವತಿಯ ದೇಹದಲ್ಲಿ ಗಾಯದ ಗುರುತುಗಳಿವೆ. ಹೀಗಾಗಿ ಇದು ಕೊಲೆ ಎಂಬ ಅನುಮಾನವಿದೆ. ವಿಚಾರಣೆಗಾಗಿ ವ್ಯಕ್ತಿಯನ್ನು ಬಂಧಿಸಲಾಗುವುದು ಎಂದು ಅವರು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>