ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರು, ‘2023ರ ಆ. 25ರ ಪತ್ರವನ್ನು ಗಮನದಲ್ಲಿಟ್ಟುಕೊಂಡು ನಾನು ನಿಮಗೆ ನಿಂದನೆಯ ನೋಟಿಸ್ ನೀಡುತ್ತಿಲ್ಲ. ಕರಡು ನೀತಿಯ ಸ್ಥಿತಿ ಸೂಚಿಸುವ ನವೀಕೃತ ವರದಿಯನ್ನು ಸಲ್ಲಿಸಲು ದೆಹಲಿ ಸರ್ಕಾರಕ್ಕೆ 8 ವಾರಗಳ ಕಾಲಾವಕಾಶ ನೀಡಲಾಗಿದೆ. ಬಳಿಕ ಸರ್ಕಾರವು ಈ ವಿಷಯವನ್ನು ಪಟ್ಟಿ ಮಾಡಲಿ’ ಎಂದು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.