ಸರ್ಕಾರವು ಸಂಬಂಧಪಟ್ಟ ಕಾನೂನಿಗೆ ತಿದ್ದುಪಡಿ ತರುವವರೆಗೂ ₹5 ಲಕ್ಷದವರೆಗೆ ವಾರ್ಷಿಕ ವರಮಾನ ಇರುವವರೂ ಇಡಬ್ಲ್ಯುಎಸ್ ಕೋಟಾ ಅಡಿಯಲ್ಲಿ ಶಾಲೆಗಳಿಗೆ ಪ್ರವೇಶ ಪಡೆಯಬಹುದು ಎಂದು 2023ರ ಡಿಸೆಂಬರ್ನಲ್ಲಿ ಏಕಸದಸ್ಯ ಪೀಠವೊಂದು ಆದೇಶ ನೀಡಿತ್ತು. ನ್ಯಾಯಮೂರ್ತಿಗಳಾದ ಮನಮೋಹನ್ ಮತ್ತು ಮನಮೀತ್ ಪಿ.ಎಸ್. ಅರೋರಾ ಅವರು ಇದ್ದ ವಿಭಾಗೀಯ ಪೀಠವು ಏಕಸದಸ್ಯ ಪೀಠದ ಕೆಲವು ನಿರ್ದೇಶನಗಳಿಗೆ ಮಂಗಳವಾರ ತಡೆ ನೀಡಿದೆ.