<p class="bodytext"><strong>ಡೆಹ್ರಾಡೂನ್:</strong> utt</p>.<p class="bodytext">ಸುಮಾರು 3,500 ಲೀಟರ್ ನೀರನ್ನು ತೆಹ್ರಿ ಸರೋವರದಿಂದ ಹೊತ್ತ ಐಎಎಫ್ಗೆ ಸೇರಿದ ಹೆಲಿಕಾಪ್ಟರ್ ಜಿಲ್ಲೆಯ ಗಾಜಾ, ಪೋಖ್ರಿ ಮತ್ತು ಕ್ವಿಲಿ ವಲಯದಲ್ಲಿ ನೀರು ಸಿಂಪಡಿಸಿತು ಎಂದು ನರೇಂದ್ರ ನಗರದ ಡಿಎಫ್ಒ ಹಾಗೂ ನೋಡಲ್ ಅಧಿಕಾರಿ ಡಿ.ಎಸ್.ಮೀನಾ ಅವರು ತಿಳಿಸಿದರು.</p>.<p>ಈ ವಲಯದಲ್ಲಿ ಆವರಿಸಿರುವ ಬೆಂಕಿಯನ್ನು ನಂದಿಸಲು ಹೆಲಿಕಾಪ್ಟರ್ಗಳು ಒಟ್ಟು ನಾಲ್ಕು ಬಾರಿ ನೀರು ಸಿಂಪಡಿಸಿವೆ. ಮಂಗಳವಾರ ಇಂತದೇ ಕಾರ್ಯಾಚರಣೆಯನ್ನು ತೌಲ್ಧರ್ ಬ್ಲಾಕ್ ವಲಯದಲ್ಲಿ ಕೈಗೊಳ್ಳಲಾಗುವುದು ಎಂದು ತೆಹ್ರಿ ವಲಯದ ಡಿಎಫ್ಒ ಕೊಕೊ ರೋಸ್ ತಿಳಿಸಿದರು.</p>.<p>ಐಎಎಫ್ ಹೆಲಿಕಾಫ್ಟರ್ಗಳು ನೀರು ಸಂಗ್ರಹಿಸಲು ಅನುವಾಗುವಂತೆ ತೆಹ್ರಿ ಸರೋವರದಲ್ಲಿ ಬೋಟಿಂಗ್ ಕಾರ್ಯವನ್ನು ರದ್ದುಪಡಿಸಲಾಗಿತ್ತು. ಕುಮಾನ್ ವಲಯದಲ್ಲಿಯೂ ನೀರು ಸಿಂಪಡಿಸಲು ಹೆಲಿಕಾಪ್ಟರ್ ಸಜ್ಜುಗೊಳಿಸಿದ್ದರೂ ಪ್ರತಿಕೂಲ ವಾತಾವರಣದ ಕಾರಣ ಕಾರ್ಯಾಚರಣೆ ನಡೆಯಲಿಲ್ಲ.</p>.<p>ಗರ್ವಾಲ್ ಮತ್ತು ಕುಮಾನ್ ವಲಯದಲ್ಲಿ ಅಗ್ನಿ ಆಕಸ್ಮಿಕಕ್ಕೆ ಕಾರಣವಾಗುವ ಸುಮಾರು 40 ಸ್ಥಳಗಳನ್ನು ಗುರುತಿಸಲಾಗಿದೆ. ಈ ವರ್ಷ ಜನವರಿಯಿಂದ ಸುಮಾರು 983 ಕಾಳ್ಗಿಚ್ಚು ಪ್ರಕರಣಗಳು ವರದಿಯಾಗಿದ್ದು, ಒಟ್ಟು 1,292 ಹೆಕ್ಟೇರ್ ಅರಣ್ಯ ಪ್ರದೇಶ ಬೆಂಕಿಯಿಂದ ಬಾಧಿತವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="bodytext"><strong>ಡೆಹ್ರಾಡೂನ್:</strong> utt</p>.<p class="bodytext">ಸುಮಾರು 3,500 ಲೀಟರ್ ನೀರನ್ನು ತೆಹ್ರಿ ಸರೋವರದಿಂದ ಹೊತ್ತ ಐಎಎಫ್ಗೆ ಸೇರಿದ ಹೆಲಿಕಾಪ್ಟರ್ ಜಿಲ್ಲೆಯ ಗಾಜಾ, ಪೋಖ್ರಿ ಮತ್ತು ಕ್ವಿಲಿ ವಲಯದಲ್ಲಿ ನೀರು ಸಿಂಪಡಿಸಿತು ಎಂದು ನರೇಂದ್ರ ನಗರದ ಡಿಎಫ್ಒ ಹಾಗೂ ನೋಡಲ್ ಅಧಿಕಾರಿ ಡಿ.ಎಸ್.ಮೀನಾ ಅವರು ತಿಳಿಸಿದರು.</p>.<p>ಈ ವಲಯದಲ್ಲಿ ಆವರಿಸಿರುವ ಬೆಂಕಿಯನ್ನು ನಂದಿಸಲು ಹೆಲಿಕಾಪ್ಟರ್ಗಳು ಒಟ್ಟು ನಾಲ್ಕು ಬಾರಿ ನೀರು ಸಿಂಪಡಿಸಿವೆ. ಮಂಗಳವಾರ ಇಂತದೇ ಕಾರ್ಯಾಚರಣೆಯನ್ನು ತೌಲ್ಧರ್ ಬ್ಲಾಕ್ ವಲಯದಲ್ಲಿ ಕೈಗೊಳ್ಳಲಾಗುವುದು ಎಂದು ತೆಹ್ರಿ ವಲಯದ ಡಿಎಫ್ಒ ಕೊಕೊ ರೋಸ್ ತಿಳಿಸಿದರು.</p>.<p>ಐಎಎಫ್ ಹೆಲಿಕಾಫ್ಟರ್ಗಳು ನೀರು ಸಂಗ್ರಹಿಸಲು ಅನುವಾಗುವಂತೆ ತೆಹ್ರಿ ಸರೋವರದಲ್ಲಿ ಬೋಟಿಂಗ್ ಕಾರ್ಯವನ್ನು ರದ್ದುಪಡಿಸಲಾಗಿತ್ತು. ಕುಮಾನ್ ವಲಯದಲ್ಲಿಯೂ ನೀರು ಸಿಂಪಡಿಸಲು ಹೆಲಿಕಾಪ್ಟರ್ ಸಜ್ಜುಗೊಳಿಸಿದ್ದರೂ ಪ್ರತಿಕೂಲ ವಾತಾವರಣದ ಕಾರಣ ಕಾರ್ಯಾಚರಣೆ ನಡೆಯಲಿಲ್ಲ.</p>.<p>ಗರ್ವಾಲ್ ಮತ್ತು ಕುಮಾನ್ ವಲಯದಲ್ಲಿ ಅಗ್ನಿ ಆಕಸ್ಮಿಕಕ್ಕೆ ಕಾರಣವಾಗುವ ಸುಮಾರು 40 ಸ್ಥಳಗಳನ್ನು ಗುರುತಿಸಲಾಗಿದೆ. ಈ ವರ್ಷ ಜನವರಿಯಿಂದ ಸುಮಾರು 983 ಕಾಳ್ಗಿಚ್ಚು ಪ್ರಕರಣಗಳು ವರದಿಯಾಗಿದ್ದು, ಒಟ್ಟು 1,292 ಹೆಕ್ಟೇರ್ ಅರಣ್ಯ ಪ್ರದೇಶ ಬೆಂಕಿಯಿಂದ ಬಾಧಿತವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>