ನವದೆಹಲಿ: ‘ಪ್ರಸ್ತುತ ನ್ಯಾಯಾಂಗದ ಮೇಲೆ ‘ಅತ್ಯಧಿಕ ಒತ್ತಡ’ ಇದೆ. ಆದರೆ, ಒಂದೊಮ್ಮೆ ‘ಇಂಡಿಯಾ’ ಮೈತ್ರಿಕೂಟದ ಸರ್ಕಾರವು ಕೇಂದ್ರದಲ್ಲಿ ರಚನೆಯಾದರೆ, ನ್ಯಾಯಾಂಗದ ಮೇಲಿನ ಒತ್ತಡವನ್ನು ನಿವಾರಿಸಿ ಸ್ವತಂತ್ರಗೊಳಿಸಲಾಗುವುದು. ಹೀಗಾದರೆ, ಜೂನ್ 5ರ ಬಳಿಕ ನಾನು ಜೈಲಿನಿಂದಲೂ ಬಿಡುಗಡೆಯಾಗುತ್ತೇನೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರು ಬುಧವಾರ ಹೇಳಿದರು.