ಈ ಸಂಬಂಧ ಆರಂಭದಲ್ಲಿ ಶಿವಸೇನಾ ಮುಖಂಡ ಆನಂದರಾವ್ ಆಡ್ಸುಲ್ ಅವರು ಮುಂಬೈ ಜಿಲ್ಲಾ ಜಾತಿ ಪ್ರಮಾಣಪತ್ರ ಪರಿಶೀಲನಾ ಸಮಿತಿಗೆ ದೂರು ನೀಡಿದ್ದರು. ಅದನ್ನು ಪರಿಶೀಲಿಸಿದದ ಸಮಿತಿಯು ಜಾತಿ ಪ್ರಮಾಣ ಪತ್ರವನ್ನು ಮಾನ್ಯ ಮಾಡಿತ್ತು. ಅದನ್ನು ಅವರು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ನವನೀತ್ ಅವರು ತನ್ನ ಪತಿ, ಶಾಸಕ ರವಿ ಅವರ ಪ್ರಭಾವ ಬಳಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ವಾದಿಸಿದ್ದರು.