ದೆಹಲಿಯಲ್ಲಿ ರಾಷ್ಟ್ರೀಯ ಎನ್ಸಿಸಿ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭಾರತ ಸ್ವದೇಶಿ ಕೋವಿಡ್ ಲಸಿಕೆಯನ್ನು ಸಿದ್ಧಪಡಿಸಿ ಕೋವಿಡ್ ವಿರುದ್ಧ ಹೋರಾಡಿದೆ. ಅಲ್ಲದೆ ಭಾರತಕ್ಕೆ ಸವಾಲೆಸೆದವರ ಆಧುನಿಕ ಕ್ಷಿಪಣಿಗಳನ್ನು ನಾಶಪಡಿಸುವ ಮೂಲಕ ತನ್ನ ಸಾಮರ್ಥ್ಯವನ್ನು ತೋರಿಸಿದೆ. ಭಾರತದ ಪ್ರತಿಯೊಂದು ಕ್ಷೇತ್ರಕ್ಕೂ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಲು ಸಾಮರ್ಥ್ಯವಿದೆ’ ಎಂದರು.