<p><strong>ಭುವನೇಶ್ವರ್</strong>: ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸುವ ಮೂಲಕ ಭಾರತ ತನ್ನ ನಾಗರಿಕರ ಜೀವ ಉಳಿಸಲು ಏನು ಬೇಕಾದರೂ ಮಾಡುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿದೆ ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹೇಳಿದ್ದಾರೆ.</p>.ಸಿಲ್ಕ್ಯಾರಾ ರಕ್ಷಣಾ ಕಾರ್ಯಾಚರಣೆ: ಯಂತ್ರ ಮೀರಿಸಿದ ‘ಮನುಷ್ಯ ಶ್ರಮ’.<p>17 ದಿನಗಳ ನಿರಂತರ ರಕ್ಷಣಾ ಕಾರ್ಯಾರಣೆಯ ಮೂಲಕ ಒಡಿಶಾದ ಐವರು ಸೇರಿದಂತೆ 41 ಕಾರ್ಮಿಕರನ್ನು ಸಿಲ್ಕ್ಯಾರಾ ಸುರಂಗದಿಂದ ರಕ್ಷಿತವಾಗಿ ಹೊರತರಲಾಯಿತು. </p><p>‘ರಕ್ಷಣಾ ಕಾರ್ಯಾಚರಣೆಯ ಯಶಸ್ವಿಗೊಂಡಿದ್ದು ಕೇಳಿ ನನಗೆ ಸಂತೋಷವಾಯಿತು. ಕಾರ್ಮಿಕರು ಸುರಕ್ಷಿತವಾಗಿ ಮನೆಗೆ ಮರಳುತ್ತಾರೆ ಎನ್ನುವುದು ಒಳ್ಳೆಯ ವಿಷಯ. ಎನ್ಡಿಆರ್ಎಫ್ ಹಾಗೂ ರಕ್ಷಣಾ ತಂಡಕ್ಕೆ ಪಟ್ನಾಯಕ್ ಧನ್ಯವಾದ‘ ಅರ್ಪಿಸಿದ್ದಾರೆ</p>.ಸಿಲ್ಕ್ಯಾರಾ ಸುರಂಗದಲ್ಲಿ ಸಾವು ಗೆದ್ದು ಬಂದ ಕಾರ್ಮಿಕರ ಜೊತೆ ಪ್ರಧಾನಿ ಮೋದಿ ಮಾತು.<p>ಒಡಿಶಾ ರಾಜ್ಯದ ಐವರು ಕಾರ್ಮಿಕರ ಗ್ರಾಮಗಳಲ್ಲಿ ಜನರು ಸಿಹಿ ಹಂಚಿ, ಡೋಲು ಬಾರಿಸಿ ಮೂಲಕ ಮಂಗಳವಾರ ಸಂಭ್ರಮಿಸಿದರು. ಕಾರ್ಮಿಕರ ಕುಟುಂಬ ಸದಸ್ಯರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಂಸ್ಥೆಗಳಿಗೆ ಧನ್ಯವಾದ ತಿಳಿಸಿದ್ದಾರೆ</p><p>ಕಾರ್ಮಿಕನ ತಂದೆ ಮಾತನಾಡಿ ‘ನನ್ನ ಮಗನನ್ನು ಮತ್ತೆ ಉತ್ತರಾಖಂಡಕ್ಕೆ ಕೆಲಸಕ್ಕೆ ಕಳುಹಿಸುವುದಿಲ್ಲ, ರಾಜ್ಯದಲ್ಲಿಯೇ ಕೆಲಸ ನೀಡುವಂತೆ‘ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭುವನೇಶ್ವರ್</strong>: ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸುವ ಮೂಲಕ ಭಾರತ ತನ್ನ ನಾಗರಿಕರ ಜೀವ ಉಳಿಸಲು ಏನು ಬೇಕಾದರೂ ಮಾಡುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿದೆ ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹೇಳಿದ್ದಾರೆ.</p>.ಸಿಲ್ಕ್ಯಾರಾ ರಕ್ಷಣಾ ಕಾರ್ಯಾಚರಣೆ: ಯಂತ್ರ ಮೀರಿಸಿದ ‘ಮನುಷ್ಯ ಶ್ರಮ’.<p>17 ದಿನಗಳ ನಿರಂತರ ರಕ್ಷಣಾ ಕಾರ್ಯಾರಣೆಯ ಮೂಲಕ ಒಡಿಶಾದ ಐವರು ಸೇರಿದಂತೆ 41 ಕಾರ್ಮಿಕರನ್ನು ಸಿಲ್ಕ್ಯಾರಾ ಸುರಂಗದಿಂದ ರಕ್ಷಿತವಾಗಿ ಹೊರತರಲಾಯಿತು. </p><p>‘ರಕ್ಷಣಾ ಕಾರ್ಯಾಚರಣೆಯ ಯಶಸ್ವಿಗೊಂಡಿದ್ದು ಕೇಳಿ ನನಗೆ ಸಂತೋಷವಾಯಿತು. ಕಾರ್ಮಿಕರು ಸುರಕ್ಷಿತವಾಗಿ ಮನೆಗೆ ಮರಳುತ್ತಾರೆ ಎನ್ನುವುದು ಒಳ್ಳೆಯ ವಿಷಯ. ಎನ್ಡಿಆರ್ಎಫ್ ಹಾಗೂ ರಕ್ಷಣಾ ತಂಡಕ್ಕೆ ಪಟ್ನಾಯಕ್ ಧನ್ಯವಾದ‘ ಅರ್ಪಿಸಿದ್ದಾರೆ</p>.ಸಿಲ್ಕ್ಯಾರಾ ಸುರಂಗದಲ್ಲಿ ಸಾವು ಗೆದ್ದು ಬಂದ ಕಾರ್ಮಿಕರ ಜೊತೆ ಪ್ರಧಾನಿ ಮೋದಿ ಮಾತು.<p>ಒಡಿಶಾ ರಾಜ್ಯದ ಐವರು ಕಾರ್ಮಿಕರ ಗ್ರಾಮಗಳಲ್ಲಿ ಜನರು ಸಿಹಿ ಹಂಚಿ, ಡೋಲು ಬಾರಿಸಿ ಮೂಲಕ ಮಂಗಳವಾರ ಸಂಭ್ರಮಿಸಿದರು. ಕಾರ್ಮಿಕರ ಕುಟುಂಬ ಸದಸ್ಯರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಂಸ್ಥೆಗಳಿಗೆ ಧನ್ಯವಾದ ತಿಳಿಸಿದ್ದಾರೆ</p><p>ಕಾರ್ಮಿಕನ ತಂದೆ ಮಾತನಾಡಿ ‘ನನ್ನ ಮಗನನ್ನು ಮತ್ತೆ ಉತ್ತರಾಖಂಡಕ್ಕೆ ಕೆಲಸಕ್ಕೆ ಕಳುಹಿಸುವುದಿಲ್ಲ, ರಾಜ್ಯದಲ್ಲಿಯೇ ಕೆಲಸ ನೀಡುವಂತೆ‘ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>