<p><strong>ನವದೆಹಲಿ</strong>: ‘ಭಾರತ ಮತ್ತು ಮಾಲ್ದೀವ್ಸ್ ಸಮಗ್ರ ಆರ್ಥಿಕ ಮತ್ತು ಜಲಮಾರ್ಗ ಭದ್ರತೆ ಪಾಲುದಾರಿಕೆ’ ವಿಷಯ ಕುರಿತಂತೆ ಉಭಯ ದೇಶಗಳ ವಿದೇಶಾಂಗ ಸಚಿವರ ಹಂತದ ಉನ್ನತ ಮಟ್ಟದ ಸಭೆಯು ಸೋಮವಾರ ರಾಜಧಾನಿಯಲ್ಲಿ ನಡೆಯಲಿದೆ.</p><p>ಸಭೆಯಲ್ಲಿ ಪಾಲ್ಗೊಳ್ಳಲು ಮಾಲ್ದೀವ್ಸ್ನ ವಿದೇಶಾಂಗ ಅಬ್ದುಲ್ಲಾ ಖಲೀಲ್ ನೇತೃತ್ವದ ಉನ್ನತ ಮಟ್ಟದ ನಿಯೋಗವು ಭಾನುವಾರ ಇಲ್ಲಿಗೆ ಆಗಮಿಸಿತು. ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ಜೊತೆ ಸೋಮವಾರ ಚರ್ಚಿಸಲಿದೆ. ಈ ವರ್ಷ ಖಲೀಲ್ ಅವರ 3ನೇ ಭೇಟಿ ಇದಾಗಿದೆ.</p><p>ಸಮಗ್ರ ಆರ್ಥಿಕ ಮತ್ತು ಜಲಮಾರ್ಗ ಭದ್ರತೆ ಪಾಲುದಾರಿಕೆ ಕುರಿತ ಭಾರತ–ಮಾಲ್ದೀವ್ಸ್ ನಡುವಣ ನೀಲನಕ್ಷೆಯನ್ನು ಕಳೆದ ವರ್ಷ ಅಕ್ಟೋಬರ್ನಲ್ಲಿ ಸಭೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, ಮಾಲ್ದೀವ್ಸ್ ಪ್ರಧಾನಿ ಮೊಹಮ್ಮದ್ ಮುಯಿಜು ಅನುಮೋದಿಸಿದ್ದರು.</p><p>ಈ ಬಗ್ಗೆ ರಾಜಕೀಯ ಅಭಿಪ್ರಾಯ ವಿನಿಮಯದ ಮುಂದುವರಿದ ಭಾಗವಾಗಿ ಈಗ ವಿದೇಶಾಂಗ ಸಚಿವರ ಮಟ್ಟದಲ್ಲಿ ಸಭೆ ನಡೆಯುತ್ತಿದೆ. ಇವರು ಸಚಿವ ಎಸ್.ಜೈಶಂಕರ್ ಅವರ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸುವರು ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.</p><p>ಜಲಗಡಿಗೆ ಸಂಬಂಧಿಸಿ ಮಾಲ್ದೀವ್ಸ್ ಭಾರತದ ಪ್ರಮುಖ ನೆರೆ ರಾಷ್ಟ್ರ. ನೆರೆ ರಾಷ್ಟ್ರ ಮೊದಲು ಎಂಬ ನೀತಿಗೆ ಅನುಗುಣವಾಗಿ ಈ ವಲಯದಲ್ಲಿ ಭದ್ರತೆ ಮತ್ತು ಸಮಗ್ರ ಪ್ರಗತಿಗೆ ಪೂರಕವಾಗಿ ಈಗ ಮಾತುಕತೆ ನಡೆಯುತ್ತಿದೆ ಎಂದು ಹೇಳಿಕೆಯು ವಿವರಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ‘ಭಾರತ ಮತ್ತು ಮಾಲ್ದೀವ್ಸ್ ಸಮಗ್ರ ಆರ್ಥಿಕ ಮತ್ತು ಜಲಮಾರ್ಗ ಭದ್ರತೆ ಪಾಲುದಾರಿಕೆ’ ವಿಷಯ ಕುರಿತಂತೆ ಉಭಯ ದೇಶಗಳ ವಿದೇಶಾಂಗ ಸಚಿವರ ಹಂತದ ಉನ್ನತ ಮಟ್ಟದ ಸಭೆಯು ಸೋಮವಾರ ರಾಜಧಾನಿಯಲ್ಲಿ ನಡೆಯಲಿದೆ.</p><p>ಸಭೆಯಲ್ಲಿ ಪಾಲ್ಗೊಳ್ಳಲು ಮಾಲ್ದೀವ್ಸ್ನ ವಿದೇಶಾಂಗ ಅಬ್ದುಲ್ಲಾ ಖಲೀಲ್ ನೇತೃತ್ವದ ಉನ್ನತ ಮಟ್ಟದ ನಿಯೋಗವು ಭಾನುವಾರ ಇಲ್ಲಿಗೆ ಆಗಮಿಸಿತು. ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ಜೊತೆ ಸೋಮವಾರ ಚರ್ಚಿಸಲಿದೆ. ಈ ವರ್ಷ ಖಲೀಲ್ ಅವರ 3ನೇ ಭೇಟಿ ಇದಾಗಿದೆ.</p><p>ಸಮಗ್ರ ಆರ್ಥಿಕ ಮತ್ತು ಜಲಮಾರ್ಗ ಭದ್ರತೆ ಪಾಲುದಾರಿಕೆ ಕುರಿತ ಭಾರತ–ಮಾಲ್ದೀವ್ಸ್ ನಡುವಣ ನೀಲನಕ್ಷೆಯನ್ನು ಕಳೆದ ವರ್ಷ ಅಕ್ಟೋಬರ್ನಲ್ಲಿ ಸಭೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, ಮಾಲ್ದೀವ್ಸ್ ಪ್ರಧಾನಿ ಮೊಹಮ್ಮದ್ ಮುಯಿಜು ಅನುಮೋದಿಸಿದ್ದರು.</p><p>ಈ ಬಗ್ಗೆ ರಾಜಕೀಯ ಅಭಿಪ್ರಾಯ ವಿನಿಮಯದ ಮುಂದುವರಿದ ಭಾಗವಾಗಿ ಈಗ ವಿದೇಶಾಂಗ ಸಚಿವರ ಮಟ್ಟದಲ್ಲಿ ಸಭೆ ನಡೆಯುತ್ತಿದೆ. ಇವರು ಸಚಿವ ಎಸ್.ಜೈಶಂಕರ್ ಅವರ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸುವರು ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.</p><p>ಜಲಗಡಿಗೆ ಸಂಬಂಧಿಸಿ ಮಾಲ್ದೀವ್ಸ್ ಭಾರತದ ಪ್ರಮುಖ ನೆರೆ ರಾಷ್ಟ್ರ. ನೆರೆ ರಾಷ್ಟ್ರ ಮೊದಲು ಎಂಬ ನೀತಿಗೆ ಅನುಗುಣವಾಗಿ ಈ ವಲಯದಲ್ಲಿ ಭದ್ರತೆ ಮತ್ತು ಸಮಗ್ರ ಪ್ರಗತಿಗೆ ಪೂರಕವಾಗಿ ಈಗ ಮಾತುಕತೆ ನಡೆಯುತ್ತಿದೆ ಎಂದು ಹೇಳಿಕೆಯು ವಿವರಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>