<p><strong>ನವದೆಹಲಿ:</strong> ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಕುರಿತು ಟೀಕೆ ಮುಂದುವರಿಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ‘ಕೇಂದ್ರ ಸರ್ಕಾರವು ಟ್ರಂಪ್ ಜತೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಅವರಿಗೆ ಶರಣಾಗಿದೆ. ರೈತರ ಹಿತಾಸಕ್ತಿಯನ್ನು ಕೂಡ ಬಲಿಕೊಟ್ಟಿದೆ. ಈ ಒಪ್ಪಂದವು ಭಾರತ ಮಾತೆಯನ್ನು ಮಾರಿದಂತೆ’ ಎಂದು ಕಿಡಿಕಾರಿದ್ದಾರೆ. </p><p>ಕೇಂದ್ರ ಸರ್ಕಾರದ ಬಜೆಟ್ ಕುರಿತ ಚರ್ಚೆಯಲ್ಲಿ ರಾಹುಲ್ ಗಾಂಧಿ ಮಾತನಾಡಿದ್ದಾರೆ.</p><p>ನೀವು(ಕೇಂದ್ರ ಸರ್ಕಾರ) ಭಾರತವನ್ನು, ಭಾರತ ಮಾತೆಯನ್ನು ಮಾರುತ್ತೀದ್ದಿರಾ.. ಇದನ್ನು ಮಾಡಲು ನಿಮಗೆ ನಾಚಿಕೆಯಾಗುವುದಿಲ್ಲವೇ ? ಎಂದು ಕಿಡಿಕಾರಿದ್ದಾರೆ. </p><p>ಭಾರತಕ್ಕೆ ಹಾನಿ ಉಂಟುಮಾಡುವ ಈ ಒಪ್ಪಂದವನ್ನು ಮೋದಿ ಸೇರಿದಂತೆ ಯಾರೇ ಪ್ರಧಾನಿಯಾಗಿದ್ದರು ಕೂಡ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಯಾವುದೊ ಬಾಹ್ಯ ಒತ್ತಡದಿಂದ ಅಮೆರಿಕ ಜತೆ ಮೋದಿ ಸರ್ಕಾರ ಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ. </p><p>ಒಂದು ವೇಳೆ ‘ಇಂಡಿಯಾ’ ಒಕ್ಕೂಟವು ಅಧಿಕಾರದಲ್ಲಿದ್ದು, ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಮುಂದಾಗಿದ್ದರೆ, ಟ್ರಂಪ್ ಅವರಿಗೆ ಭಾರತವನ್ನು ಅಮೆರಿಕದಷ್ಟೇ ಸಮಾನವಾಗಿ ಕಾಣುವಂತೆ ಹೇಳುತ್ತಿದ್ದೆವು ಎಂದಿದ್ದಾರೆ. </p><p>ಭಾರತವು ಯಾರಿಂದ ತೈಲ ಖರೀದಿಸಬೇಕು ಎನ್ನುವುದನ್ನು ಕೂಡ ಅಮೆರಿಕವೇ ನಿರ್ಧರಿಸುತ್ತಿದೆ. ಒಂದು ವೇಳೆ ನಾವು ಅವರು(ಅಮೆರಿಕ) ಹೇಳಿದಂತೆ ನಡೆದುಕೊಳ್ಳದಿದ್ದರೆ ನಮ್ಮ ಮೇಲೆ ಬೆದರಿಕೆಯ ರೀತಿಯಲ್ಲಿ ಹೆಚ್ಚುವರಿ ಸುಂಕ ವಿಧಿಸುತ್ತಾರೆ ಎಂದು ಹೇಳಿದ್ದಾರೆ.</p><p>ಮೋದಿಯವರು ಇತ್ತೀಚೆಗೆ ಮಾತನಾಡುವಾಗ, ಯುದ್ಧಗಳ ಕಾಲ ಮುಗಿಯಿತು ಎಂದಿದ್ದರು. ಆದರೆ, ಇಂದಿಗೂ ಜಗತ್ತಿನಾದ್ಯಂತ ಹಲವು ಭಾಗಗಳಲ್ಲಿ ಸಂಘರ್ಷಗಳಾಗುತ್ತಿವೆ. ಭಾರತದ ಮೇಲೂ ಯುದ್ಧದ ನೆರಳಿದೆ. ಇಂತಹ ಸಂದರ್ಭದಲ್ಲಿ ನಾವು ನಮ್ಮ ಶಕ್ತಿಯನ್ನು ಅರಿತುಕೊಳ್ಳಬೇಕು. ನಮ್ಮ ಪ್ರಮುಖ ಶಕ್ತಿ, ಈ ದೇಶದ ಜನರಾಗಿದ್ದಾರೆ ಎಂದು ಹೇಳಿದ್ದಾರೆ. </p><p>ಅಮೆರಿಕದ ಒತ್ತಡದಿಂದ ಮೋದಿ, ದೇಶವನ್ನು ಮಾರುತ್ತಿದ್ದಾರೆ. ಆದರೆ, ದೇಶದ ನಾಗರಿಕರ ಮಾಹಿತಿ, ಆಹಾರ ಸರಪಳಿ ಹಾಗೂ ಇಂಧನ ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಕುರಿತು ಟೀಕೆ ಮುಂದುವರಿಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ‘ಕೇಂದ್ರ ಸರ್ಕಾರವು ಟ್ರಂಪ್ ಜತೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಅವರಿಗೆ ಶರಣಾಗಿದೆ. ರೈತರ ಹಿತಾಸಕ್ತಿಯನ್ನು ಕೂಡ ಬಲಿಕೊಟ್ಟಿದೆ. ಈ ಒಪ್ಪಂದವು ಭಾರತ ಮಾತೆಯನ್ನು ಮಾರಿದಂತೆ’ ಎಂದು ಕಿಡಿಕಾರಿದ್ದಾರೆ. </p><p>ಕೇಂದ್ರ ಸರ್ಕಾರದ ಬಜೆಟ್ ಕುರಿತ ಚರ್ಚೆಯಲ್ಲಿ ರಾಹುಲ್ ಗಾಂಧಿ ಮಾತನಾಡಿದ್ದಾರೆ.</p><p>ನೀವು(ಕೇಂದ್ರ ಸರ್ಕಾರ) ಭಾರತವನ್ನು, ಭಾರತ ಮಾತೆಯನ್ನು ಮಾರುತ್ತೀದ್ದಿರಾ.. ಇದನ್ನು ಮಾಡಲು ನಿಮಗೆ ನಾಚಿಕೆಯಾಗುವುದಿಲ್ಲವೇ ? ಎಂದು ಕಿಡಿಕಾರಿದ್ದಾರೆ. </p><p>ಭಾರತಕ್ಕೆ ಹಾನಿ ಉಂಟುಮಾಡುವ ಈ ಒಪ್ಪಂದವನ್ನು ಮೋದಿ ಸೇರಿದಂತೆ ಯಾರೇ ಪ್ರಧಾನಿಯಾಗಿದ್ದರು ಕೂಡ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಯಾವುದೊ ಬಾಹ್ಯ ಒತ್ತಡದಿಂದ ಅಮೆರಿಕ ಜತೆ ಮೋದಿ ಸರ್ಕಾರ ಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ. </p><p>ಒಂದು ವೇಳೆ ‘ಇಂಡಿಯಾ’ ಒಕ್ಕೂಟವು ಅಧಿಕಾರದಲ್ಲಿದ್ದು, ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಮುಂದಾಗಿದ್ದರೆ, ಟ್ರಂಪ್ ಅವರಿಗೆ ಭಾರತವನ್ನು ಅಮೆರಿಕದಷ್ಟೇ ಸಮಾನವಾಗಿ ಕಾಣುವಂತೆ ಹೇಳುತ್ತಿದ್ದೆವು ಎಂದಿದ್ದಾರೆ. </p><p>ಭಾರತವು ಯಾರಿಂದ ತೈಲ ಖರೀದಿಸಬೇಕು ಎನ್ನುವುದನ್ನು ಕೂಡ ಅಮೆರಿಕವೇ ನಿರ್ಧರಿಸುತ್ತಿದೆ. ಒಂದು ವೇಳೆ ನಾವು ಅವರು(ಅಮೆರಿಕ) ಹೇಳಿದಂತೆ ನಡೆದುಕೊಳ್ಳದಿದ್ದರೆ ನಮ್ಮ ಮೇಲೆ ಬೆದರಿಕೆಯ ರೀತಿಯಲ್ಲಿ ಹೆಚ್ಚುವರಿ ಸುಂಕ ವಿಧಿಸುತ್ತಾರೆ ಎಂದು ಹೇಳಿದ್ದಾರೆ.</p><p>ಮೋದಿಯವರು ಇತ್ತೀಚೆಗೆ ಮಾತನಾಡುವಾಗ, ಯುದ್ಧಗಳ ಕಾಲ ಮುಗಿಯಿತು ಎಂದಿದ್ದರು. ಆದರೆ, ಇಂದಿಗೂ ಜಗತ್ತಿನಾದ್ಯಂತ ಹಲವು ಭಾಗಗಳಲ್ಲಿ ಸಂಘರ್ಷಗಳಾಗುತ್ತಿವೆ. ಭಾರತದ ಮೇಲೂ ಯುದ್ಧದ ನೆರಳಿದೆ. ಇಂತಹ ಸಂದರ್ಭದಲ್ಲಿ ನಾವು ನಮ್ಮ ಶಕ್ತಿಯನ್ನು ಅರಿತುಕೊಳ್ಳಬೇಕು. ನಮ್ಮ ಪ್ರಮುಖ ಶಕ್ತಿ, ಈ ದೇಶದ ಜನರಾಗಿದ್ದಾರೆ ಎಂದು ಹೇಳಿದ್ದಾರೆ. </p><p>ಅಮೆರಿಕದ ಒತ್ತಡದಿಂದ ಮೋದಿ, ದೇಶವನ್ನು ಮಾರುತ್ತಿದ್ದಾರೆ. ಆದರೆ, ದೇಶದ ನಾಗರಿಕರ ಮಾಹಿತಿ, ಆಹಾರ ಸರಪಳಿ ಹಾಗೂ ಇಂಧನ ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>