<p><strong>ಗಿರ್ ಸೋಮನಾಥ್ (ಗುಜರಾತ್):</strong> ಸುಮಾರು ಮೂರು ವರ್ಷಗಳ ಹಿಂದೆ ಶಿಕ್ಷೆ ಪೂರ್ಣಗೊಂಡಿದ್ದರೂ ಪಾಕಿಸ್ತಾನದ ಜೈಲಿನಲ್ಲೇ ಇದ್ದ 36 ವರ್ಷದ ಗುಜರಾತ್ ಮೂಲದ ಮೀನುಗಾರ ಕಳೆದ ತಿಂಗಳು ಜೈಲಿನಲ್ಲೇ ಮೃತಪಟ್ಟಿದ್ದರು. ಅವರ ಮೃತದೇಹವನ್ನು ಗಿರ್ ಸೋಮನಾಥ್ ಜಿಲ್ಲೆಯ ಅವರ ಹುಟ್ಟೂರಿಗೆ ತರಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p><p>ಜಿಲ್ಲೆಯ ಉನಾ ತಾಲೂಕಿನ ಚಿಖ್ಲಿ ಗ್ರಾಮದ ನಿವಾಸಿ ಭಾಗಭಾಯ್ ಬಂಭಾನಿಯಾ ಜನವರಿ 16ರಂದು ಕರಾಚಿಯ ಜೈಲಿನಲ್ಲಿ ಹೃದಯಾಘಾತದಿಂದ ಮೇರಪಟ್ಟಿದ್ದರು ಎಂದು ಜಾಫ್ರಾಬಾದ್ನ ಮೀನುಗಾರಿಕೆ ಅಧಿಕಾರಿ ಒ.ಎ. ಮಕ್ರಾನಿ ತಿಳಿಸಿದ್ದಾರೆ.</p><p>‘ಅವರ ಮೃತದೇಹವನ್ನು ವಾಘಾದ ಭಾರತ-ಪಾಕಿಸ್ತಾನ ಗಡಿಯಲ್ಲಿ ಮೀನುಗಾರಿಕೆ ಇಲಾಖೆಯ ತಂಡಕ್ಕೆ ಹಸ್ತಾಂತರಿಸಲಾಯಿತು. ಮೃತದೇಹವನ್ನು ವಿಮಾನದ ಮೂಲಕ ಅಹಮದಾಬಾದ್ಗೆ ಸಾಗಿಸಲಾಯಿತು. ನಂತರ, ಶನಿವಾರ ರಸ್ತೆ ಮೂಲಕ ಅವರ ಹುಟ್ಟೂರಿಗೆ ತರಲಾಯಿತು’ಎಂದು ಮಕ್ರಾನಿ ಹೇಳಿದ್ದಾರೆ.</p><p>2022ರ ಫೆ 18ರಂದು ಗುಜರಾತ್ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಯ ಸಮಯದಲ್ಲಿ 'ಬುರಾಕ್' ಎಂಬ ಮೀನುಗಾರಿಕಾ ದೋಣಿ ಆಕಸ್ಮಿಕವಾಗಿ ಅಂತರರಾಷ್ಟ್ರೀಯ ಸಮುದ್ರ ಗಡಿಯನ್ನು ದಾಟಿದ ನಂತರ, ಬಂಭಾನಿಯಾ ಅವರನ್ನು ಪಾಕಿಸ್ತಾನಿ ಅಧಿಕಾರಿಗಳು ಬಂಧಿಸಿದ್ದರು.</p><p>ನಂತರ, ಅವರನ್ನು ತಪ್ಪಿತಸ್ಥರೆಂದು ಘೋಷಿಸಿ ಶಿಕ್ಷೆ ವಿಧಿಸಲಾಗಿತ್ತು. ಶಿಕ್ಷೆ ಅನುಭವಿಸಿದ ನಂತರವೂ ಅವರು ದೀರ್ಘಕಾಲ ಜೈಲಿನಲ್ಲಿ ಇದ್ದರು. ಜೈಲಿನಲ್ಲಿ ಅವರ ಆರೋಗ್ಯ ಹದಗೆಟ್ಟಿತ್ತು. ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ಗಣನೀಯ ವಿಳಂಬದ ನಂತರ ಎರಡೂ ದೇಶಗಳ ಸರ್ಕಾರಗಳ ನಡುವಿನ ಕಾರ್ಯವಿಧಾನಗಳು ಪೂರ್ಣಗೊಂಡ ನಂತರ, ಮೀನುಗಾರನ ಮೃತದೇಹವನ್ನು ಭಾರತಕ್ಕೆ ತರಲಾಯಿತು ಎಂದು ಅವರು ಹೇಳಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಿರ್ ಸೋಮನಾಥ್ (ಗುಜರಾತ್):</strong> ಸುಮಾರು ಮೂರು ವರ್ಷಗಳ ಹಿಂದೆ ಶಿಕ್ಷೆ ಪೂರ್ಣಗೊಂಡಿದ್ದರೂ ಪಾಕಿಸ್ತಾನದ ಜೈಲಿನಲ್ಲೇ ಇದ್ದ 36 ವರ್ಷದ ಗುಜರಾತ್ ಮೂಲದ ಮೀನುಗಾರ ಕಳೆದ ತಿಂಗಳು ಜೈಲಿನಲ್ಲೇ ಮೃತಪಟ್ಟಿದ್ದರು. ಅವರ ಮೃತದೇಹವನ್ನು ಗಿರ್ ಸೋಮನಾಥ್ ಜಿಲ್ಲೆಯ ಅವರ ಹುಟ್ಟೂರಿಗೆ ತರಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p><p>ಜಿಲ್ಲೆಯ ಉನಾ ತಾಲೂಕಿನ ಚಿಖ್ಲಿ ಗ್ರಾಮದ ನಿವಾಸಿ ಭಾಗಭಾಯ್ ಬಂಭಾನಿಯಾ ಜನವರಿ 16ರಂದು ಕರಾಚಿಯ ಜೈಲಿನಲ್ಲಿ ಹೃದಯಾಘಾತದಿಂದ ಮೇರಪಟ್ಟಿದ್ದರು ಎಂದು ಜಾಫ್ರಾಬಾದ್ನ ಮೀನುಗಾರಿಕೆ ಅಧಿಕಾರಿ ಒ.ಎ. ಮಕ್ರಾನಿ ತಿಳಿಸಿದ್ದಾರೆ.</p><p>‘ಅವರ ಮೃತದೇಹವನ್ನು ವಾಘಾದ ಭಾರತ-ಪಾಕಿಸ್ತಾನ ಗಡಿಯಲ್ಲಿ ಮೀನುಗಾರಿಕೆ ಇಲಾಖೆಯ ತಂಡಕ್ಕೆ ಹಸ್ತಾಂತರಿಸಲಾಯಿತು. ಮೃತದೇಹವನ್ನು ವಿಮಾನದ ಮೂಲಕ ಅಹಮದಾಬಾದ್ಗೆ ಸಾಗಿಸಲಾಯಿತು. ನಂತರ, ಶನಿವಾರ ರಸ್ತೆ ಮೂಲಕ ಅವರ ಹುಟ್ಟೂರಿಗೆ ತರಲಾಯಿತು’ಎಂದು ಮಕ್ರಾನಿ ಹೇಳಿದ್ದಾರೆ.</p><p>2022ರ ಫೆ 18ರಂದು ಗುಜರಾತ್ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಯ ಸಮಯದಲ್ಲಿ 'ಬುರಾಕ್' ಎಂಬ ಮೀನುಗಾರಿಕಾ ದೋಣಿ ಆಕಸ್ಮಿಕವಾಗಿ ಅಂತರರಾಷ್ಟ್ರೀಯ ಸಮುದ್ರ ಗಡಿಯನ್ನು ದಾಟಿದ ನಂತರ, ಬಂಭಾನಿಯಾ ಅವರನ್ನು ಪಾಕಿಸ್ತಾನಿ ಅಧಿಕಾರಿಗಳು ಬಂಧಿಸಿದ್ದರು.</p><p>ನಂತರ, ಅವರನ್ನು ತಪ್ಪಿತಸ್ಥರೆಂದು ಘೋಷಿಸಿ ಶಿಕ್ಷೆ ವಿಧಿಸಲಾಗಿತ್ತು. ಶಿಕ್ಷೆ ಅನುಭವಿಸಿದ ನಂತರವೂ ಅವರು ದೀರ್ಘಕಾಲ ಜೈಲಿನಲ್ಲಿ ಇದ್ದರು. ಜೈಲಿನಲ್ಲಿ ಅವರ ಆರೋಗ್ಯ ಹದಗೆಟ್ಟಿತ್ತು. ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ಗಣನೀಯ ವಿಳಂಬದ ನಂತರ ಎರಡೂ ದೇಶಗಳ ಸರ್ಕಾರಗಳ ನಡುವಿನ ಕಾರ್ಯವಿಧಾನಗಳು ಪೂರ್ಣಗೊಂಡ ನಂತರ, ಮೀನುಗಾರನ ಮೃತದೇಹವನ್ನು ಭಾರತಕ್ಕೆ ತರಲಾಯಿತು ಎಂದು ಅವರು ಹೇಳಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>