ನವದೆಹಲಿ:ರೈಲ್ವೆಯಲ್ಲಿ ರಿಯಾಯಿತಿ ಮತ್ತು ಇತರವೆಚ್ಚಗಳು ತುಂಬಾ ಹೆಚ್ಚಾಗಿದ್ದು, ಹಿರಿಯ ನಾಗರಿ ಕರಿಗೆ ಪ್ರಯಾಣದಲ್ಲಿ ಸದ್ಯಕ್ಕೆ ಯಾವುದೇ ರಿಯಾಯಿತಿ ಸೌಲಭ್ಯವಿಲ್ಲ ಎಂದು ರೈಲ್ವೆ ಸಚಿವಅಶ್ವಿನಿ ವೈಷ್ಣವ್ ಬುಧವಾರ ಹೇಳಿದ್ದಾರೆ.
ಲೋಕಸಭೆಯಲ್ಲಿ ಮಹಾರಾಷ್ಟ್ರದ ಪಕ್ಷೇತರ ಸಂಸದ ನವನೀತ್ ರಾಣಾ ಅವರುರೈಲು ಪ್ರಯಾಣದಲ್ಲಿ ಹಿರಿಯ ನಾಗರಿಕರಿಗೆ ನೀಡುತ್ತಿದ್ದರಿಯಾಯಿತಿ ದರದ ಪ್ರಯಾಣ ಸೌಲಭ್ಯವನ್ನು ಪುನಃ ಕಲ್ಪಿಸಲಾಗುವುದೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು ಈ ಸ್ಪಷ್ಟನೆ ನೀಡಿದ್ದಾರೆ.
ಕೋವಿಡ್ 19 ಸಾಂಕ್ರಾಮಿಕದ ಅವಧಿಯಿಂದ ಈ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿತ್ತು.
ಸದ್ಯ ವೇತನ ಮತ್ತು ಪಿಂಚಣಿ ಹಾಗೂಸಾರ್ವಜನಿಕ ಸಾರಿಗೆ ವೆಚ್ಚ ಗಳುತುಂಬಾ ಏರಿಕೆಯಾಗಿವೆ. ಕಳೆದ ಬಾರಿ ಪ್ರಯಾಣಿಕರ ಸೌಲಭ್ಯಗಳಿಗೆ ₹59 ಸಾವಿರ ಕೋಟಿ ಸಬ್ಸಿಡಿ ನೀಡ ಲಾಗಿತ್ತು. ರೈಲ್ವೆಯ ಈಗಿನ ಪರಿಸ್ಥಿತಿ ನೋಡಿಕೊಂಡು ಮುಂದೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.