ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ಕೈಬಿಟ್ಟಿದ್ದ 20 ಮಂದಿ ವಿರುದ್ಧ ಪೂರಕ ಆರೋಪಪಟ್ಟಿಯನ್ನು ಸಿಬಿಐ ಸಲ್ಲಿಸಿತ್ತು. ಚಾಯಿಬಾಸಾ ಖಜಾನೆಯ ಮಾಜಿ ಸಿಬ್ಬಂದಿ ಲಾಲ್ ಮೋಹನ್ ಗೋಪ್, ಭರತ್ ನಾರಾಯಣ್ ದಾಸ್, ಸಹದೇವ್ ಪ್ರಸಾದ್ ಸೇರಿ 16 ಅಪರಾಧಿಗಳಿಗೆಈಗ ಶಿಕ್ಷೆ ನೀಡಲಾಗಿದೆ. ಉಳಿದ ನಾಲ್ವರಲ್ಲಿ ಒಬ್ಬರು ತಲೆಮರೆಸಿಕೊಂಡಿದ್ದು, ಮೂವರು ನಿಧನರಾಗಿದ್ದಾರೆ.