ಸಭೆ ಬಳಿಕ, ಶಾಸಕರು ಖುಂಟಿ ಜಿಲ್ಲೆಯ ಲತರಾತೂ ಸಮೀಪದ ಮೊಮೆಂಟ್ಸ್ ರೆಸಾರ್ಟ್ಗೆ ತೆರಳಿ ದರು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಆಲಮಗೀರ್ ಆಲಮ್ ಅವರು ಹೇಳಿದ್ದಾರೆ. ‘ಶಾಸಕರನ್ನು ಸೆಳೆಯಲಾಗದು. ಎಲ್ಲರೂ ರಾಂಚಿಯಲ್ಲಿ ಇರಲಿದ್ದಾರೆ’ ಎಂದು ಶುಕ್ರವಾರವಷ್ಟೇ ಅವರು ಹೇಳಿಕೆ ನೀಡಿದ್ದರು. ಪಕ್ಷದ ನಿರ್ದೇಶನವನ್ನು ಪಾಲಿಸುತ್ತೇವೆ ಎಂದು ಶಾಸಕಿ ಶಿಲ್ಪಿ ನೇಹಾ ಟಿರ್ಕೆ ಹೇಳಿದ್ದಾರೆ.