<p><strong>ಗುವಾಹಟಿ:</strong> ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ನಿರ್ಮಾಣವಾಗುತ್ತಿರುವ ಕಾರಿಡಾರ್ಗೆ ಭಾನುವಾರ(ಜ.18) ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.</p><p>ಕಾಜಿರಂಗ ಕಾರಿಡಾರ್ನಿಂದ ರಾಷ್ಟ್ರೀಯ ಉದ್ಯಾನದಲ್ಲಿ ವನ್ಯಜೀವಿಗಳ ಓಡಾಟಕ್ಕೆ ಸಹಾಯವಾಗಲಿದೆ ಹಾಗೂ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. </p><p>ಕಾಜಿರಂಗ ಕಾರಿಡಾರ್ ಯೋಜನೆಯು ಅಸ್ಸಾಂ ರಾಜ್ಯದ ಕೇಂದ್ರ ಭಾಗ ಮತ್ತು ಉತ್ತರ ಭಾಗದ ನಡುವೆ ಸಂಪರ್ಕ ಬೆಸೆಯಲು ಸಹಾಯವಾಗಲಿದೆ ಹಾಗೂ ರಾಷ್ಟ್ರೀಯ ಉದ್ಯಾನದ ಜೀವ ವೈವಿಧ್ಯವನ್ನು ರಕ್ಷಿಸುವ ದೃಷ್ಟಿಯಲ್ಲಿ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.</p><p>ಸುಪ್ರೀಂ ಕೋರ್ಟ್ ಹಾಗೂ ಭಾರತೀಯ ವನ್ಯಜೀವಿ ಸಂಸ್ಥೆಯ ನಿರ್ದೇಶನದಂತೆ ಕಾಜಿರಂಗ ಕಾರಿಡಾರ್ ಯೋಜನೆಯ ನೀಲನಕ್ಷೆಯನ್ನು ತಯಾರಿಸಲಾಗಿತ್ತು. 3 ವರ್ಷದೊಳಗೆ ಈ ಯೋಜನೆಯ ಕಾಮಗಾರಿ ಸಂಪೂರ್ಣವಾಗಲಿದೆ ಎಂದು ತಿಳಿಸಿದ್ದಾರೆ.</p><p>ರಾಷ್ಟ್ರೀಯ ಹೆದ್ದಾರಿ –37ರ ಕಲಿಯಾಬೋರ್-ನುಮಲಿಗಢ ಚತುಷ್ಪಥ ರಸ್ತೆ ಹಾಗೂ ಜಖಲಬಂಧ ಮತ್ತು ಬೊಕಾಖಾತ್ ಬೈಪಾಸ್ ನಡುವಿನ 34.45 ಕಿ.ಮೀ ಉದ್ದದಲ್ಲಿ ಕಾಜಿರಂಗ ಕಾರಿಡಾರ್ ನಿರ್ಮಾಣವಾಗುತ್ತಿದೆ. ಪ್ರವಾಹದ ಸಂದರ್ಭದಲ್ಲಿ ಪ್ರಾಣಿಗಳು ರಸ್ತೆ ದಾಟಲು ಸಹಾಯವಾಗುವಂತೆ ಈ ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ ₹6,957 ಕೋಟಿ ವೆಚ್ಚ ಮಾಡಲಾಗುತ್ತಿದೆ. </p><p>ಕಾಜಿರಂಗ ರಾಷ್ಟ್ರೀಯ ಉದ್ಯಾನವು ಹುಲಿ ಸಂರಕ್ಷಿತ ಹಾಗೂ ಜೀವವೈವಿದ್ಯ ತಾಣವಾಗಿದೆ. ಜಗತ್ತಿನಲ್ಲೇ ಅತಿಹೆಚ್ಚು ಒಂದು ಕೊಂಬಿನ ಖಡ್ಗಮೃಗಗಳು, ಹೆಚ್ಚಿನ ಸಂಖ್ಯೆಯ ಹುಲಿ, ಆನೆ, ನಿರಾನೆ, ಜಿಂಕೆ ಸೇರಿದಂತೆ ಹಲವು ಪ್ರಬೇಧದ ಪ್ರಾಣಿ – ಪಕ್ಷಿಗಳು ಇಲ್ಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುವಾಹಟಿ:</strong> ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ನಿರ್ಮಾಣವಾಗುತ್ತಿರುವ ಕಾರಿಡಾರ್ಗೆ ಭಾನುವಾರ(ಜ.18) ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.</p><p>ಕಾಜಿರಂಗ ಕಾರಿಡಾರ್ನಿಂದ ರಾಷ್ಟ್ರೀಯ ಉದ್ಯಾನದಲ್ಲಿ ವನ್ಯಜೀವಿಗಳ ಓಡಾಟಕ್ಕೆ ಸಹಾಯವಾಗಲಿದೆ ಹಾಗೂ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. </p><p>ಕಾಜಿರಂಗ ಕಾರಿಡಾರ್ ಯೋಜನೆಯು ಅಸ್ಸಾಂ ರಾಜ್ಯದ ಕೇಂದ್ರ ಭಾಗ ಮತ್ತು ಉತ್ತರ ಭಾಗದ ನಡುವೆ ಸಂಪರ್ಕ ಬೆಸೆಯಲು ಸಹಾಯವಾಗಲಿದೆ ಹಾಗೂ ರಾಷ್ಟ್ರೀಯ ಉದ್ಯಾನದ ಜೀವ ವೈವಿಧ್ಯವನ್ನು ರಕ್ಷಿಸುವ ದೃಷ್ಟಿಯಲ್ಲಿ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.</p><p>ಸುಪ್ರೀಂ ಕೋರ್ಟ್ ಹಾಗೂ ಭಾರತೀಯ ವನ್ಯಜೀವಿ ಸಂಸ್ಥೆಯ ನಿರ್ದೇಶನದಂತೆ ಕಾಜಿರಂಗ ಕಾರಿಡಾರ್ ಯೋಜನೆಯ ನೀಲನಕ್ಷೆಯನ್ನು ತಯಾರಿಸಲಾಗಿತ್ತು. 3 ವರ್ಷದೊಳಗೆ ಈ ಯೋಜನೆಯ ಕಾಮಗಾರಿ ಸಂಪೂರ್ಣವಾಗಲಿದೆ ಎಂದು ತಿಳಿಸಿದ್ದಾರೆ.</p><p>ರಾಷ್ಟ್ರೀಯ ಹೆದ್ದಾರಿ –37ರ ಕಲಿಯಾಬೋರ್-ನುಮಲಿಗಢ ಚತುಷ್ಪಥ ರಸ್ತೆ ಹಾಗೂ ಜಖಲಬಂಧ ಮತ್ತು ಬೊಕಾಖಾತ್ ಬೈಪಾಸ್ ನಡುವಿನ 34.45 ಕಿ.ಮೀ ಉದ್ದದಲ್ಲಿ ಕಾಜಿರಂಗ ಕಾರಿಡಾರ್ ನಿರ್ಮಾಣವಾಗುತ್ತಿದೆ. ಪ್ರವಾಹದ ಸಂದರ್ಭದಲ್ಲಿ ಪ್ರಾಣಿಗಳು ರಸ್ತೆ ದಾಟಲು ಸಹಾಯವಾಗುವಂತೆ ಈ ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ ₹6,957 ಕೋಟಿ ವೆಚ್ಚ ಮಾಡಲಾಗುತ್ತಿದೆ. </p><p>ಕಾಜಿರಂಗ ರಾಷ್ಟ್ರೀಯ ಉದ್ಯಾನವು ಹುಲಿ ಸಂರಕ್ಷಿತ ಹಾಗೂ ಜೀವವೈವಿದ್ಯ ತಾಣವಾಗಿದೆ. ಜಗತ್ತಿನಲ್ಲೇ ಅತಿಹೆಚ್ಚು ಒಂದು ಕೊಂಬಿನ ಖಡ್ಗಮೃಗಗಳು, ಹೆಚ್ಚಿನ ಸಂಖ್ಯೆಯ ಹುಲಿ, ಆನೆ, ನಿರಾನೆ, ಜಿಂಕೆ ಸೇರಿದಂತೆ ಹಲವು ಪ್ರಬೇಧದ ಪ್ರಾಣಿ – ಪಕ್ಷಿಗಳು ಇಲ್ಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>